ಶಂಕರೇಗೌಡರಪಾಳ್ಯ ನಿವಾಸಿಗಳ ಪ್ರತಿಭಟನೆ

KannadaprabhaNewsNetwork |  
Published : Aug 15, 2025, 01:00 AM IST
ಫೆÇೀಟೋ 1 : ಸೋಂಪುರ ಹೋಬಳಿಯ ತಟ್ಟೇಕೆರೆ ಗ್ರಾಮದ ಬಳಿಯ ಶಂಕರೇಗೌಡರಪಾಳ್ಯ ನಿವಾಸಿಗಳು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಂಕರೇಗೌಡರಪಾಳ್ಯ ನಿವಾಸಿಗಳು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಂಕರೇಗೌಡರಪಾಳ್ಯ ನಿವಾಸಿಗಳು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸುಮಾರು ನೂರಕ್ಕೂ ಅಧಿಕ ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿರುವ ರಸ್ತೆಯನ್ನು ಬಲಾಡ್ಯರ ಬೆಂಬಲದಿಂದ ಮುಚ್ಚಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ರಸ್ತೆ ಬಿಡಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳೀಯ ನಿವಾಸಿ ಸಿದ್ದರಾಜು ಮಾತನಾಡಿ, ಈ ಮೊದಲು ನಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಿತ್ತು. ಇದೀಗ ಈ ರಸ್ತೆ ಮುಚ್ಚಿದ್ದಾರೆ, 25 ಎಕರೆ ಜಮೀನು ಕಬಳಿಸುವ ಹುನ್ನಾರದಿಂದ, ಸುಮಾರು 10 ಕುಟುಂಬಗಳು ನೆಲೆಸಿರುವ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದಂತಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಮಗೆ ರಸ್ತೆ ಬಿಡಿಸಿಕೊಡಬೇಕೆಂದು ಮನವಿ ಮಾಡಿದರು. ಹಿರಿಯ ಮುಖಂಡ ರಾಮಚಂದ್ರಯ್ಯ, ಹನುಮಂತರಾಜು, ಸಿದ್ದಗಂಗಯ್ಯ, ಶಿವಣ್ಣ, ಮಲ್ಲಿಕಾರ್ಜುನಯ್ಯ, ಮಂಜುನಾಥ್, ರೇಣುಕಮ್ಮ, ಜಗದೀಶ್, ರಾಜಣ್ಣ, ಸಂಪತ್, ಶಿವಕುಮಾರ್, ಶಾರದಮ್ಮ, ರತ್ನಮ್ಮ, ಸಾಕಮ್ಮ, ಮಂಜುಳ, ಶಿವಶಂಕರಯ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ