ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಶಾರದಾ ಮಾತಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಜಯಂತಿ ಆಚರಿಸಿದರು.
ಬಳಿಕ ಶಂಕರ್ ಬಾಬು ಮಾತನಾಡಿ, ಶಾರದಾ ಮಾತೆ ಅವರ 173ನೇ ಜನ್ಮ ದಿನೋತ್ಸವವನ್ನು ಗ್ರಾಮದ ಸರ್ಕಾರಿ ಶಾಲೆಯ 4 ಬಡ ಹೆಣ್ಣು ಮಕ್ಕಳ ಹೆಸರಲ್ಲಿ ತಲಾ ಐದು ಸಾವಿರ ರು. ಭವಿಷ್ಯನಿಧಿ ಠೇವಣಿ ಇಟ್ಟು ಬಾಂಡ್ ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಲಾಗಿದೆ ಎಂದರು.ಇಂದು ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟಿರುವ ಹಣ ವರ್ಷ ಕಳೆದಂತೆ ದ್ವಿಗುಣವಾಗಲಿದೆ. ಅವರ ಮುಂದಿನ ಭವಿಷ್ಯಕ್ಕೆ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ಶ್ರೀಮಾತೆ ಅವರ ಹೆಸರಿನಲ್ಲಿ ಸಮಾಜಕ್ಕೆ ಅಗತ್ಯವಿರುವ ಹೆಚ್ಚಿನ ಕಾರ್ಯಕ್ರಮಗಳನ್ನು ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ವಿಲ್ಲೋವುಡ್ ಕೆಮಿಕಲ್ಸ್ ಕಂಪನಿಯಿಂದ ಜಾಗೃತಿ ಅಭಿಯಾನ
ಹಾಂಗ್ಕಾಂಗ್ ಮೂಲದ ಸಸ್ಯ ಸಂರಕ್ಷಣಾ ರಾಸಾಯನಿಕಗಳ ಪ್ರಮುಖ ತಯಾರಕರಾದ ವಿಲ್ಲೋವುಡ್ ಕೆಮಿಕಲ್ಸ್ ಲಿಮಿಟೆಡ್ ಗ್ರಾಮ ಕಂಪನಿಯ ಸ್ಥಾಪನಾ ದಿನದಂದು ಸ್ಥಳೀಯ ರೈತರಿಗೆ ಕೀಟನಾಶಕ ಅನ್ವಯಿಸುವ ವಿಧಾನಗಳ ಕುರಿತು ಪಾಂಡವಪುರ ತಾಲೂಕು ಬಿಲ್ಲೇನಹಳ್ಳಿಯಲ್ಲಿ ಜಾಗೃತಿ ಅಭಿಯಾನ ನಡೆಸಿತು.
ವಿಲೋ ವುಡ್ ಕಂಪನಿಯು ಎಲ್ಲಾ ರೀತಿಯ ಬೆಳೆಗಳಿಗೆ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಕಳೆನಾಶಕಗಳು ಮತ್ತು ಬೆಳೆ ಬೆಳವಣಿಗೆಯ ಉತ್ತೇಜಕಗಳನ್ನು ಹೊಂದಿರುವ ಉನ್ನತ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಸೂಕ್ತ ಸಮಯ ಮತ್ತು ಪ್ರಮಾಣದಲ್ಲಿ ಬಳಸುವುದರಿಂದ ಉತ್ತಮ ಲಾಭವನ್ನು ನೀಡಬಹುದು ಎಂದು ಹೇಳಿದರು.