ಬಡ ಹೆಣ್ಣು ಮಕ್ಕಳಿಗೆ ತಲಾ 5 ಸಾವಿರ ಭವಿಷ್ಯ ನಿಧಿ ಠೇವಣಿ

KannadaprabhaNewsNetwork |  
Published : Dec 13, 2025, 02:00 AM IST
12ಕೆಎಂಎನ್ ಡಿ23 | Kannada Prabha

ಸಾರಾಂಶ

ಶಾರದಾ ಮಾತೆ ಅವರ 173ನೇ ಜನ್ಮ ದಿನೋತ್ಸವವನ್ನು ಗ್ರಾಮದ ಸರ್ಕಾರಿ ಶಾಲೆಯ 4 ಬಡ ಹೆಣ್ಣು ಮಕ್ಕಳ ಹೆಸರಲ್ಲಿ ತಲಾ ಐದು ಸಾವಿರ ರು. ಭವಿಷ್ಯನಿಧಿ ಠೇವಣಿ ಇಟ್ಟು ಬಾಂಡ್ ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶಾರದ ಮಾತೆ ಜಯಂತಿ ಅಂಗವಾಗಿ ಮಂಡ್ಯ ರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆ ನಾಲ್ಕು ಹೆಣ್ಣು ಮಕ್ಕಳ ಹೆಸರಲ್ಲಿ ತಲಾ ಐದು ಸಾವಿರ ಭವಿಷ್ಯನಿಧಿ ಠೇವಣಿ ಇಟ್ಟು ಬಾಂಡ್ ವಿತರಿಸಿದರು.

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಶಾರದಾ ಮಾತಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಜಯಂತಿ ಆಚರಿಸಿದರು.

ಬಳಿಕ ಶಂಕರ್ ಬಾಬು ಮಾತನಾಡಿ, ಶಾರದಾ ಮಾತೆ ಅವರ 173ನೇ ಜನ್ಮ ದಿನೋತ್ಸವವನ್ನು ಗ್ರಾಮದ ಸರ್ಕಾರಿ ಶಾಲೆಯ 4 ಬಡ ಹೆಣ್ಣು ಮಕ್ಕಳ ಹೆಸರಲ್ಲಿ ತಲಾ ಐದು ಸಾವಿರ ರು. ಭವಿಷ್ಯನಿಧಿ ಠೇವಣಿ ಇಟ್ಟು ಬಾಂಡ್ ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಲಾಗಿದೆ ಎಂದರು.

ಇಂದು ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟಿರುವ ಹಣ ವರ್ಷ ಕಳೆದಂತೆ ದ್ವಿಗುಣವಾಗಲಿದೆ. ಅವರ ಮುಂದಿನ ಭವಿಷ್ಯಕ್ಕೆ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ಶ್ರೀಮಾತೆ ಅವರ ಹೆಸರಿನಲ್ಲಿ ಸಮಾಜಕ್ಕೆ ಅಗತ್ಯವಿರುವ ಹೆಚ್ಚಿನ ಕಾರ್ಯಕ್ರಮಗಳನ್ನು ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆ ವೇದಿಕೆ ಗೌರವಾಧ್ಯಕ್ಷ ಬಳ್ಳೇಕೆರೆ ಶ್ರೀಕಾಂತ್, ಸದಸ್ಯರಾದ ಛಾಯದೇವಿ, ಅಂಕಶೆಟ್ಟಿ, ಮುಖಂಡರಾದ ಸ್ವಾಮೀಗೌಡ, ಪಿಲೀಪ್, ನಾಗೇಂದ್ರ, ವೀಣಾಬಾಯಿ, ಪ್ರಶಾಂತ್‌ಕುಮಾರ್, ಭಾಗ್ಯಮ್ಮ ಸೇರಿದಂತೆ ಇತರರು ಇದ್ದರು.

ವಿಲ್ಲೋವುಡ್‌ ಕೆಮಿಕಲ್ಸ್‌ ಕಂಪನಿಯಿಂದ ಜಾಗೃತಿ ಅಭಿಯಾನ

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಂಗ್‌ಕಾಂಗ್ ಮೂಲದ ಸಸ್ಯ ಸಂರಕ್ಷಣಾ ರಾಸಾಯನಿಕಗಳ ಪ್ರಮುಖ ತಯಾರಕರಾದ ವಿಲ್ಲೋವುಡ್ ಕೆಮಿಕಲ್ಸ್ ಲಿಮಿಟೆಡ್ ಗ್ರಾಮ ಕಂಪನಿಯ ಸ್ಥಾಪನಾ ದಿನದಂದು ಸ್ಥಳೀಯ ರೈತರಿಗೆ ಕೀಟನಾಶಕ ಅನ್ವಯಿಸುವ ವಿಧಾನಗಳ ಕುರಿತು ಪಾಂಡವಪುರ ತಾಲೂಕು ಬಿಲ್ಲೇನಹಳ್ಳಿಯಲ್ಲಿ ಜಾಗೃತಿ ಅಭಿಯಾನ ನಡೆಸಿತು.

ಈ ಕಾರ್ಯಕ್ರಮದಲ್ಲಿ ಕಂಪನಿ ವ್ಯವಸ್ಥಾಪಕರು ರೈತರಿಗೆ ಕೀಟನಾಶಕ ಸಿಂಪಡಿಸುವ ಉಪಕರಣಗಳನ್ನು ಹೇಗೆ ಖರೀದಿಸುವುದು, ಬಳಸುವುದು, ಸಂಗ್ರಹಿಸುವುದು ಮತ್ತು ನಿರ್ವಹಿಸುವುದು ಎಂಬುದನ್ನು ಕಲಿಸುತ್ತಾರೆ. ಅದೇ ರೀತಿ ವಿಲ್ಲೌಡ್ ಕೆಮಿಕಲ್ಸ್ ಲಿಮಿಟೆಡ್ ಯಾವಾಗಲೂ ಡಾ.ವೆಲಾಕ್ಸ್ ನಂತಹ ಪರಿಸರ ಸುರಕ್ಷಿತ ಮತ್ತು ರೈತ ಸುರಕ್ಷಿತ ಉತ್ಪನ್ನಗಳನ್ನು ಉತ್ತೇಜಿಸುತ್ತದೆ, ಇದು ಬೆಳೆಗಳಿಗೆ ರಕ್ಷಣೆ ಮತ್ತು ಸಸ್ಯ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ವಿಜಯ್‌ಮನು ತಿಳಿಸಿದರು.

ವಿಲೋ ವುಡ್ ಕಂಪನಿಯು ಎಲ್ಲಾ ರೀತಿಯ ಬೆಳೆಗಳಿಗೆ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಕಳೆನಾಶಕಗಳು ಮತ್ತು ಬೆಳೆ ಬೆಳವಣಿಗೆಯ ಉತ್ತೇಜಕಗಳನ್ನು ಹೊಂದಿರುವ ಉನ್ನತ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಸೂಕ್ತ ಸಮಯ ಮತ್ತು ಪ್ರಮಾಣದಲ್ಲಿ ಬಳಸುವುದರಿಂದ ಉತ್ತಮ ಲಾಭವನ್ನು ನೀಡಬಹುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ