ಕನ್ನಡಪ್ರಭ ವಾರ್ತೆ ಧಾರವಾಡ
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪಂ. ರಾಜಶೇಖರ ಮನಸೂರ ಅವರ 2ನೇ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಮನಸೂರ ಅವರ ಜೀವನದುದ್ದಕ್ಕೂ ಅವರ ನೆರಳಿನಂತೆ ಬಾಳಿ, ಜೈಪುರ ಅತ್ರೌಲಿ ಘರಾಣೆಯ ಸಂಗೀತ ಪರಂಪರೆ ಬೆಳೆಸಿದರು ಎಂದರು.ಧಾರವಾಡದ ಸಂಗೀತ ಪರಂಪರೆಯು ಅವಿಚ್ಛಿನ್ನವಾದುದು, ಅದು ಅತ್ಯಂತ ಶ್ರೇಷ್ಠತೆಯಿಂದ ಮುಂದುವರಿದಿದೆ. ನಮ್ಮ ಹಿಂದೂಸ್ತಾನಿ ಪರಂಪರೆಯು ಇಡೀ ದೇಶವೇ ಧಾರವಾಡದ ಕಡೆಗೆ ತಿರುಗಿ ನೋಡುವಂತೆ ಮಾಡಿದವರು ಅವರು. ಪಂ.ಬಸವರಾಜ ರಾಜಗುರು, ಪಂ. ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು, ಭಾರತರತ್ನ ಪಂ.ಭೀಮಶೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ ಅವರಂತಹ ಮೇರು ಗಾಯಕರಿಂದಾಗಿ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಗಾಯಕ ಡಾ. ಶಾಂತಾರಾಮ ಹೆಗಡೆ ಅಭಿಪ್ರಾಯ ಪಟ್ಟರು.
ಹಾರ್ಮೊನಿಯಂ ಕಲಾವಿದ ಯು.ಎಂ. ನಿರಂಜನಮೂರ್ತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ, ಸಂಗೀತ ಕ್ಷೇತ್ರದಲ್ಲಿ ಡಾ. ರಾಜಶೇಖರ ಮನಸೂರ ಮಾಡಿದ ಅನುಪಮ ಸಾಧನೆ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದರು.
ಸಂಗೀತಾ ರಾಜಶೇಖರ ಮನಸೂರ ವೇದಿಕೆಯಲ್ಲಿದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಸುಜಾತಾ ಗುರವ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು. ಪೂರ್ವಿ ಜೆ. ಪ್ರಾರ್ಥಿಸಿದರು. ಸಂಗೀತೋತ್ಸವದಲ್ಲಿ ಪಂ. ರಾಜಶೇಖರ ಮನಸೂರ ಅವರ ಶಿಷ್ಯರಾದ ಡಾ. ಚಂದ್ರಿಕಾ ಕಾಮತ, ಡಾ. ಮೃತ್ಯುಂಜಯ ಅಗಡಿ, ಡಾ. ಮಿಥುನ ಚಕ್ರವರ್ತಿ, ಡಾ. ಜಯದೇವಿ ಜಂಗಮಶೆಟ್ಟಿ ಹಾಗೂ ಯುವ ಗಾಯಕಿ ಜೆ. ಪೂರ್ವಿ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಉಸ್ತಾದ್ ನಿಸ್ಸಾರ ಅಹಮ್ಮದ್ ಹಾಗೂ ಪ್ರಸಾದ ಮಡಿವಾಳರ ಮತ್ತು ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಹಾಗೂ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು.