ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಾಗಾರ

KannadaprabhaNewsNetwork |  
Published : Sep 02, 2024, 02:00 AM IST
ಫೋಟೋ: ೧ಪಿಟಿಆರ್-ಬಿಜೆಪಿ ಪುತ್ತೂರಿನಲ್ಲಿ ಬಿಜೆಪಿ ವಿಧಾನಸಭಾ ಕ್ಷೇತ್ರ ಸದಸ್ಯತಾ ಅಭಿಯಾನ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಗ್ರಾಮಾಂತರ ಮಂಡಲ ಸದಸ್ಯತನಾ ಅಭಿಯಾನದ ಪ್ರಮುಖರಾಗಿ ಉಮೇಶ್ ಕೋಡಿಬೈಲು, ಹರಿಪ್ರಸಾದ್ ಯಾದವ್ ಮತ್ತು ಸುನೀಲ್ ದಡ್ಡು ಹಾಗೂ ನಗರ ಮಂಡಲ ಪ್ರಮುಖರಾಗಿ ನಾಗೇಶ್ ಪ್ರಭು, ಯುವರಾಜ್ ಪೆರಿಯತ್ತೋಡಿ ಮತ್ತು ವಸಂತಲಕ್ಷ್ಮಿ ಅವರನ್ನು ಜಿಲ್ಲಾ ಬಿಜೆಪಿಯಿಂದ ವತಿಯಿಂದ ನಿಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯತಾ ಅಭಿಯಾನ ೨೦೨೪ರ ಕಾರ್ಯಾಗಾರವು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಪಿ ಉಜ್ರೆಮಾರು ಕಲ್ಲೇಗ ಅಧ್ಯಕ್ಷತೆಯಲ್ಲಿ ಕಲ್ಲೇಗ ಭಾರತಮಾತಾ ಸಭಾಭವನದಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಪುತ್ತೂರು ಪ್ರಭಾರಿ ಸುನೀಲ್ ಆಳ್ವಾ, ಜಿಲ್ಲೆಯ ಸದಸ್ಯತಾ ಅಭಿಯಾನದ ಸಂಯೋಜಕರಾದ ವಿಕಾಸ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಸದಸ್ಯತಾ ಅಭಿಯಾನದ ಸಹ ಸಂಚಾಲಕ ನಿತೀಶ್ ಶಾಂತಿವನ, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಅನಿಲ್ ತೆಂಕಿಲ, ನಿಕಟಪೂರ್ವ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾ, ಪಿ.ಜಿ. ಜಗನ್ನೀವಾಸ್ ರಾವ್, ಬೂಡಿಯಾರ್ ರಾಧಾಕೃಷ್ಣ ರೈ, ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಮುಖಂಡರಾದ ಅಪ್ಪಯ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸ್ವಾಗತಿಸಿದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು ವಂದಿಸಿದರು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ನಿರೂಪಿಸಿದರು.

ಗ್ರಾಮಾಂತರ ಮಂಡಲ ಸದಸ್ಯತನಾ ಅಭಿಯಾನದ ಪ್ರಮುಖರಾಗಿ ಉಮೇಶ್ ಕೋಡಿಬೈಲು, ಹರಿಪ್ರಸಾದ್ ಯಾದವ್ ಮತ್ತು ಸುನೀಲ್ ದಡ್ಡು ಹಾಗೂ ನಗರ ಮಂಡಲ ಪ್ರಮುಖರಾಗಿ ನಾಗೇಶ್ ಪ್ರಭು, ಯುವರಾಜ್ ಪೆರಿಯತ್ತೋಡಿ ಮತ್ತು ವಸಂತಲಕ್ಷ್ಮಿ ಅವರನ್ನು ಜಿಲ್ಲಾ ಬಿಜೆಪಿಯಿಂದ ವತಿಯಿಂದ ನಿಯೋಜಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ