ಆಗುಂಬೆಯಲ್ಲಿ ಹೆಚ್ಚುವರಿ ಬಿಎಸ್ಎನ್ಎಲ್ ಟವರ್‌ಗೆ ಕೋಟ ಸೂಚನೆ

KannadaprabhaNewsNetwork |  
Published : Nov 22, 2025, 03:00 AM IST
21ಬಿಎಸ್‌ಎನ್‌ಎಲ್ನಾಡ್ಪಾಲು ಗ್ರಾಪಂನಲ್ಲಿ ಬಿಎಸ್‌ಎನ್‌ಎಲ್‌ ಪ್ರಗತಿ ಸಭೆ ನಡೆಯಿತು | Kannada Prabha

ಸಾರಾಂಶ

ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ, ಕಾಸನಮಕ್ಕಿ ಇನ್ನಿತರ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಟವರ್‌ಗಳಲ್ಲಿ ನೆಟ್‌ವರ್ಕ್‌ನ ಸಮಸ್ಯೆಯ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ಖುದ್ದು ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಚರ್ಚೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ, ಕಾಸನಮಕ್ಕಿ ಇನ್ನಿತರ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಟವರ್‌ಗಳಲ್ಲಿ ನೆಟ್‌ವರ್ಕ್‌ನ ಸಮಸ್ಯೆಯ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ಖುದ್ದು ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಚರ್ಚೆ ಮಾಡಿದರು.

ಆಗುಂಬೆಯ ಟವರ್‌ನಲ್ಲಿ ಬ್ಯಾಟರಿ ಹಾಗೂ ಸೋಲಾರ್ ಅಳವಡಿಕೆ ಆಗದಿರುವುದರಿಂದ ನೆಟ್ವರ್ಕ್ ಸಿಗದೆ ಗ್ರಾಮ ಪಂಚಾಯಿತಿ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಂಸದರ ಗಮನಕ್ಕೆ ತಂದರು. ಈ ಬಗ್ಗ ತಕ್ಷಣ ಬ್ಯಾಟರಿ ಮತ್ತು ಸೋಲಾರ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸನಮಕ್ಕಿಯಲ್ಲಿ ನೂತನ ಟವರ್ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದೇ ಇರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪಂಚಾಯಿತಿ ಸದಸ್ಯರು ಸಂಸದರ ಗಮನಕ್ಕೆ ತಂದರು. ತಕ್ಷಣ ದೂರವಾಣಿ ಮೂಲಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ ಕೋಟ, ಇನ್ನೊಂದು ವಾರದಲ್ಲಿ ಟವರ್ ಬದಲಾವಣೆಗೆ ಅನುಮತಿ ನೀಡಬೇಕೆಂದು ಸೂಚಿಸಿದರು.ಆಗುಂಬೆಯ ಪ್ರಥಮ ತಿರುವಿನ ಬಳಿ ಅಥವಾ ನಾಡ್ಪಾಲು ಗ್ರಾಮ ಪಂಚಾಯಿತಿ ಸನಿಹದಲ್ಲಿ ನೂತನ ಟವರ್ ಅಳವಡಿಕೆಗೆ ಪ್ರಸ್ತಾಪ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸಲಹೆ ಇತ್ತರು. ನಾಡ್ಪಾಲು ಪ್ರದೇಶ ತೀರ ಹಿಂದುಳಿದ ಗ್ರಾಮವಾಗಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿ ಹೊಸ ಟವರ್‌ಗಳ ಮಂಜೂರಾತಿಗೆ ಸಭೆಯಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ನವೀನ್ ಕುಮಾರ್, ಸದಸ್ಯರು, ಜಿ.ಪಂ. ಮಾಜಿ ಸದಸ್ಯೆ ಜ್ಯೋತಿ ಹರೀಶ್, ಗ್ರಾಮಸ್ಥರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಸಿಬ್ಬಂದಿ ಹಾಜರಿದ್ದು ಅಭಿಪ್ರಾಯಗಳನ್ನು ತಿಳಿಸಿದರು. ಉಡುಪಿ ಬಿಎಸ್ಎನ್ಎಲ್ ಎಜಿಎಂ ಹರಿಕುಮಾರ್, ಜೆಟಿಓ ಕೃಷ್ಣ ಹಾಜರಿದ್ದರು.

PREV

Recommended Stories

ಡಾ. ಎಂಎನ್‌ಆರ್‌ ಪ್ರೊಡಕ್ಷನ್‌ ಸಂಸ್ಥೆ ಕನ್ನಡ ಸಿನಿಮಾ ‘ವಾದಿರಾಜ ವಾಲಗ ಮಂಡಳಿ’ ಮುಹೂರ್ತ
ಆಯುರ್ವೇದ ವಿಶ್ವದ ಹಳೆಯ ಚಿಕಿತ್ಸಾ ಪದ್ಧತಿ: ಉಜನಿಕೊಪ್ಪ