ರಾಮನಗರ: ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಪರ್ವ ದಿನವಾದ ಮಕರ ಸಂಕ್ರಾಂತಿಯಂದು ರಾಮನೂರಿನಲ್ಲಿ ರಾಮತಾರಕ ಯಜ್ಞ ಸಂಪನ್ನಗೊಂಡಿತು.
ಶ್ರೀರಾಮಚಂದ್ರರ ಪ್ರತಿಷ್ಠಾಪನೆ ಪ್ರಧಾನ ಕಳಸ, ಸೀತಾದೇವಿಯ ಉಪ ಕಳಸಗಳು, ಲಕ್ಷ್ಮಣ, ಆಂಜನೇಯರೊಡಗೂಡಿ ಶ್ರೀರಾಮರು ಇರುವ ದೇವರ ವಿಗ್ರಹಗಳನ್ನಿರಿಸಿ ಪೂಜಿಸಲಾಯಿತು. ರಾಮದೇವರ ದೇವಾಲಯದಿಂದ ಶ್ರೀ ರಾಮದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ತಂದಿರಿಸಿದ ನಂತರ ಯಜ್ಞ ಕಾರ್ಯ ಪ್ರಾರಂಭಗೊಂಡಿತು.
ಹೋಮ ಕುಂಡದಲ್ಲಿ 10ರಿಂದ 15 ವೈದಿಕರು ಹೋಮ ಹವನಗಳ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಯಜ್ಞ ಕುಂಡದಲ್ಲಿ 108 ವನಸ್ಪತಿ ಹೋಮ ದ್ರವ್ಯಗಳನ್ನು ಸಮರ್ಪಿಸಿದರು. ಮತ್ತೊಂದೆಡೆ ಉಳಿದ ವೈದಿಕರು ಲಕ್ಷಕ್ಕೂ ಅಧಿಕ ಶ್ರೀ ರಾಮತಾರಕ ಮಂತ್ರ ಶ್ಲೋಕಗಳನ್ನು ಏಕ ಕಾಲದಲ್ಲಿ ಪಠಣ ಮಾಡಿದರು.ಮಧ್ಯಾಹ್ನ 1.30ಕ್ಕೆ ರಾಮತಾರಕ ಯಜ್ಞ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಂಡ ನಂತರ ಮಹಾಮಂಗಳಾರತಿ ನಡೆಯಿತು. ಯಜ್ಞದ ಮುಂಭಾಗ ಪ್ರತಿಷ್ಠಾಪಿಸಿದ್ದ ಶ್ರೀರಾಮಪ್ರಭು, ಸೀತಾಮಾತೆ, ಲಕ್ಷ್ಮಣ , ಆಂಜನೇಯ ಮೂರ್ತಿಗಳಿಗೆ ವಿವಿಧ ಫಲಪುಷ್ಟಗಳಿಂದ ಸಿಂಗರಿಸಿ ಪೂಜಿಸಲಾಯಿತು.
ಬಾಕ್ಸ್ .........
ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಪರ್ವ ದಿನವಾಗಿದೆ. ಭೀಷ್ಮಾಚಾರ್ಯರು 58 ದಿನಗಳ ಕಾಲ ಶಯನಾವಸ್ಥೆಯಲ್ಲಿ ಮಲಗಿದ್ದ ಪುಣ್ಯಕಾಲದಲ್ಲಿ ನಿಮ್ಮ ಹೆಸರಿನಲ್ಲಿ ವಿಶೇಷ ಅರ್ಚನೆ, ಆರಾಧನೆ ಮಾಡಲಾಗಿದೆ. ಶ್ರೀ ರಾಮ ಉನ್ನತವಾದ ಶರೀರದಲ್ಲಿ ಬಲವನ್ನು, ಜನ ಸೇವೆ ಮಾಡಲು ಶಕ್ತಿ ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಗಿದೆ. ವಿಶೇಷವಾಗಿ ಸುರ್ದಶನ ಯಜ್ಞ, ಲಲಿತಾ ಪರಮೇಶ್ವರಿ ಸಾಕ್ಷಾತ್ ದುರ್ಗೆಯ ಆರಾಧನೆ ಶ್ರೀಚಕ್ರ ಅರ್ಚನೆ ನೆರವೇರಿದೆ ಎಂದು ವೈದಿಕರು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರಿಗೆ ವಿವರಿಸುವ ಮೂಲಕ ದೇವರಿಗೆ ಸಮರ್ಪಿಸಿದ್ದ ಹಣ್ಣು, ಹೂ, ಹಂಪಲುಗಳನ್ನು ನೀಡಿ ಆರ್ಶೀವಾದ ಮಾಡಿದರು.
ಆಧ್ಯಾತ್ಮಿಕ ಉನ್ನತಿ, ಯಶಸ್ಸು ಸಿಗಲೆಂದು ಪ್ರಾರ್ಥನೆ: ಇಕ್ಬಾಲ್ ಹುಸೇನ್
ನಗರದ ಬನ್ನಿಮಂಟಪದಲ್ಲಿ ಗುರುವಾರ ರಾಮತಾರಕ ಯಜ್ಞ ಕಾರ್ಯ ನೆರವೇರಿದ ನಂತರ ಮಾತನಾಡಿದ ಇಕ್ಬಾಲ್ಹುಸೇನ್ , ಲೋಕ ಕಲ್ಯಾಣಾರ್ಥ ಹಾಗೂ ವಿಘ್ನಗಳನ್ನು ನಿವಾರಿಸಿ ಶ್ರೀ ರಾಮೋತ್ಸವಕ್ಕೆ ಶಕ್ತಿ ತುಂಬುವಂತೆ ರಾಮತಾರಕ ಯಜ್ಞದ ವೇಳೆ ಶ್ರೀರಾಮ ಪ್ರಭು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇಲ್ಲಿ ಹಿಂದೂ-ಮುಸ್ಲಿಂ ಎಂಬ ಪ್ರಶ್ನೆ ಬರುವುದಿಲ್ಲ. ಜಗತ್ತಿನಲ್ಲಿ ದೇವರೊಬ್ಬ ನಾಮ ಹಲವು. ದೇವರನ್ನು ರಾಮ - ರಹೀಂನ ಹೆಸರಿನಲ್ಲಿಯೂ ಕರೆಯುತ್ತಾರೆ. ಎಲ್ಲ ಧರ್ಮಗಳು ಮತ್ತು ಜನರನ್ನು ಗೌರವಿಸಬೇಕು. ಎಲ್ಲರಿಗೂ ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು ಒಂದೇಯಾಗಿದೆ. ಮನುಷ್ಯನ ದೇಹದಲ್ಲಿ ಹರಿಯುತ್ತಿರುವುದು ಕೆಂಪು ರಕ್ತವೂ ಒಂದೇ ಆಗಿದೆ. ಜಾತಿ - ಧರ್ಮಗಳ ಹೆಸರಿನಲ್ಲಿ ಭೇದ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಎಲ್ಲಾ ವರ್ಗದ ಜನರಲ್ಲೂ ಮತ ನೀಡಿ ಎಂದು ಹೇಗೆ ಮನವಿ ಮಾಡುತ್ತೇವೆಯೋ ಅದೇ ರೀತಿಯಲ್ಲಿಯೇ ಸೇವೆ ಮಾಡಬೇಕಿದೆ. ಅದರಂತೆಯೆ ಎಲ್ಲ ಜಾತಿ ಧರ್ಮಗಳನ್ನು ಹಾಗೂ ಜನರನ್ನು ಗೌರವಿಸುವ ಮೂಲಕ ಸರ್ವ ಧರ್ಮಗಳ ಸಾಮರಸ್ಯ ಕಾಪಾಡುವ ಕೆಲಸವನ್ನು ಶಾಸಕನಾಗಿ ಮಾಡುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
15ಕೆಆರ್ ಎಂಎನ್ 3,4,5.ಜೆಪಿಜಿ
3.ರಾಮೋತ್ಸವ ಲೋಗೋ4.ವೈದಿಯಕರು ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಆಶೀರ್ವಾದ ಮಾಡಿದರು.
5.ರಾಮನಗರದ ಬನ್ನಿಮಂಟಪದಲ್ಲಿ ವೈದಿಕರು ರಾಮತಾರಕ ಯಜ್ಞ ನೆರವೇರಿಸಿದರು.