ಶಾಂತಿ, ನೆಮ್ಮದಿ ಬದುಕಿಗಾಗಿ ಧರ್ಮ ಬೇಕು

KannadaprabhaNewsNetwork |  
Published : Jun 29, 2025, 01:34 AM IST
ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಶ್ರೀ ಮಾತೆಂಗಮ್ಮದೇವಿಯ ದೇಗುಲದ ಶ್ರೀ ಮಾತೆಂಗಮ್ಮ ದೇವಿಯ ಶಿಲಾ ಮೂರ್ತಿಗೆ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಿ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಮಾನವ ಜೀವನದ ಅವಿಭಾಜ್ಯ ಅಂಗ ಧರ್ಮ. ಶಾಂತಿ- ನೆಮ್ಮದಿಯ ಬದುಕಿಗಾಗಿ ಧರ್ಮ ಆಚರಣೆ ಬೇಕು. ಪುಣ್ಯ, ಶಾಂತಿ, ನೆಮ್ಮದಿಯನ್ನು ಮಾರುಕಟ್ಟೆಗಳಲ್ಲಿ ಕೊಳ್ಳಲು ಸಾಧ್ಯವಿಲ್ಲ. ದೇಗುಲಗಳೇ ನಿಜವಾದ ನೆಮ್ಮದಿಯ ತಾಣಗಳು ಎಂದು ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದಿದ್ದಾರೆ.

- ಮಣ್ಣೆತ್ತಿನ ಅಮಾವಾಸ್ಯೆ ಪೂಜೆ ಕಾರ್ಯಕ್ರಮದಲ್ಲಿ ಸದ್ಗುರು ಶಿವಯೋಗಿ ಶ್ರೀ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಮಾನವ ಜೀವನದ ಅವಿಭಾಜ್ಯ ಅಂಗ ಧರ್ಮ. ಶಾಂತಿ- ನೆಮ್ಮದಿಯ ಬದುಕಿಗಾಗಿ ಧರ್ಮ ಆಚರಣೆ ಬೇಕು. ಪುಣ್ಯ, ಶಾಂತಿ, ನೆಮ್ಮದಿಯನ್ನು ಮಾರುಕಟ್ಟೆಗಳಲ್ಲಿ ಕೊಳ್ಳಲು ಸಾಧ್ಯವಿಲ್ಲ. ದೇಗುಲಗಳೇ ನಿಜವಾದ ನೆಮ್ಮದಿಯ ತಾಣಗಳು ಎಂದು ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದರು.

ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಶ್ರೀ ಮಾತೆಂಗಮ್ಮದೇವಿ ದೇಗುಲದ ಶ್ರೀ ಮಾತೆಂಗಮ್ಮ ದೇವಿಯ ಶಿಲಾಮೂರ್ತಿಗೆ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಿ ಅವರು ಮಾತನಾಡಿದರು.

ಅಧಿಕಾರ. ಅಂತಸ್ತಿನಿಂದ ಏನನ್ನೂ ಸಾಧಿಸುಲು ಸಾಧ್ಯವಿಲ್ಲ. ಸಂಪತ್ತು ಶಾಶ್ವತವಲ್ಲ, ಚಂಚಲವಾದದ್ದು. ಆದ್ದರಿಂದ ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬ ವಾಕ್ಯದಂತೆ ದೇವರು ಕೊಟ್ಟ ಸಂಪತ್ತಿನ ಕೊಂಚ ಭಾಗವನ್ನಾದರೂ ದಾನ ಮಾಡುವ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಹೇಳಿದರು.

ನಿಸರ್ಗಕ್ಕೆ ಹುಟ್ಟಿ ಬಂದಾಗ ಭೂಮಿಯ ಮೇಲಿನ ಮರವೊಂದರಿಂದ ತೊಟ್ಟಿಲು ಮನುಷ್ಯ ತಯಾರಿಸಿದರೆ, ಮರಣದ ವೇಳೆಗೆ ದೇವರು ಮರವೊಂದರಿಂದ ಚಟ್ಟ ತಯಾರು ಮಾಡಿ ಇಟ್ಟಿರುತ್ತಾನೆ. ಆದಾಯ ಸಂಪತ್ತಿನ ಭರದಲ್ಲಿ ಆರೋಗ್ಯ ಆನಂದ ಕಣ್ಮರೆಯಾಗುತ್ತಿದೆ. ಮನುಷ್ಯ ಎಲ್ಲ ಗಳಿಸುತ್ತಿದ್ದಾನೆ, ಎಲ್ಲ ಪಡೆದುಕೊಳ್ಳುತ್ತಿದ್ದಾನೆ. ಬದುಕಿನಲ್ಲಿ ನಮ್ಮ ಪಾತ್ರ ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.

ಶ್ರೀ ಮಾತೆಂಗಮ್ಮ ದೇವಿಗೆ ರುದ್ರಾಭಿಷೇಕ, ಹೋಮ ಹವನಾದಿಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಎಂ.ಎಸ್‌.ಶಾಸ್ತ್ರಿಹೊಳೆಮಠ, ಸುರೇಶ್‌ನವಲೆ, ದೇಗುಲ ಸಮಿತಿಯ ಹಾಲಸಿದ್ದಪ್ಪ, ಜಗದೀಶ್‌, ಮಂಜುನಾಥ, ಕುಭೇರಪ್ಪ, ಸತೀಶ್‌, ಬಸವರಾಜಪ್ಪ, ನಾಗರಾಜಪ್ಪ ಮತ್ತಿತರರಿದ್ದರು.

- - -

-ಚಿತ್ರ:

ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಶ್ರೀ ಮಾತೆಂಗಮ್ಮ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಆಶೀರ್ವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ