ತುಂಗಾ ಪತ್ತಿನ ಸಂಘದ ನಿರ್ದೇಶಕರ ಚುನಾವಣೆ ಫಲಿತಾಂಶ ಪ್ರಕಟ

KannadaprabhaNewsNetwork |  
Published : Mar 04, 2025, 12:36 AM IST
ಹೊನ್ನಾಳಿ ಫೋಟೋ 3ಎಚ್.ಎಲ್.ಐ1 ಹೊನ್ನಾಳಿ ತುಂಗಾಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು. | Kannada Prabha

ಸಾರಾಂಶ

ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಾರ್ಚ್ 2ರಂದು ಚುನಾವಣೆ ನಡೆಯಿತು. ಒಟ್ಟು 13 ಸ್ಥಾನಗಳಿದ್ದು, 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಹೊನ್ನಾಳಿ: ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಾರ್ಚ್ 2ರಂದು ಚುನಾವಣೆ ನಡೆಯಿತು. ಒಟ್ಟು 13 ಸ್ಥಾನಗಳಿದ್ದು, 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಸಾಮಾನ್ಯ ಕ್ಷೇತ್ರ (7), ಮಹಿಳಾ ಮೀಸಲು (2), ಹಿಂದುಳಿದ ಪ್ರ ವರ್ಗ- ಅ (1), ಹಿಂದುಳಿದ ಪ್ರ ವರ್ಗ- ಬ (1) ಹಾಗೂ ಪರಿಶಿಷ್ಟ ಜಾತಿ (1), ಪರಿಶಿಷ್ಟ ಪಂಗಡಕ್ಕೆ (1) ಮೀಸಲು ಸ್ಥಾನ ನಿಗದಿಯಾಗಿತ್ತು.

ವಿಜೇತ ಅಭ್ಯರ್ಥಿಗಳು:

ಎಚ್.ಎ. ಅಶೋಕ್ (452 ಮತ), ಜಿ.ಎನ್. ಸುರೇಶ್ (442), ಎಸ್. ಶ್ರೀನಿವಾಸ್ (374), ಕೆ.ಎಂ. ರಘು (359), ಎನ್. ರಾಜೇಂದ್ರಪ್ಪ (336), ಬಿ.ವಿ. ಚಂದ್ರಪ್ಪ( 326), ಬಿ.ಪಿ. ಅಶೋಕ್ ( 407), ದಿಡಗೂರು ಬಿ.ಎಚ್. ಗೋಪಾಲಕೃಷ್ಣ (391), ಡಿ.ಸಿ. ಬಸವರಾಜಪ್ಪ ( 372), ಎ.ಕೆ. ತಿಮ್ಮೇಶ್ 302 ಮತ ಪಡೆದು ವಿಜೇತರಾದರು.

ಅವಿರೋಧ ಆಯ್ಕೆ:

ಹಿಂದುಳಿದ ಪ್ರವರ್ಗ ಅ ಮೀಸಲು ಕ್ಷೇತ್ರದಿಂದ ಎಚ್.ಬಿ. ಪುನೀತ್, ಮಹಿಳಾ ಮೀಸಲು ಕ್ಷೇತ್ರದಿಂದ ಜಯಮ್ಮ ಬಸವನಗೌಡ ಮತ್ತು ಕೆ.ವಿ.ಚನ್ನಮ್ಮ ವಿರೂಪಾಕ್ಷಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ತಿಳಿಸಿದರು.

- - - (** ಈ ಪೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-3ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ ನಡೆದಿದ್ದು, ವಿಜೇತ ಅಭ್ಯರ್ಥಿಗಳಿಗೆ ಮಾಲೆ ಹಾಕಿ, ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ