ಸಿಲಿಂಡರ್ ಸ್ಫೋಟಕ್ಕೆ ಕಿತ್ತುಹೋದ ಮನೆಯ ಛಾವಣಿ

KannadaprabhaNewsNetwork |  
Published : Jun 25, 2024, 12:35 AM IST
ಪೊಟೋ ಜೂ.24ಎಂಡಿಎಲ್ 2. ಮುಧೋಳ ತಾಲೂಕಿನ ಶಿರೋಳ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ ಬ್ಲಾಸ್ಟ್ ಆಗಿ ಮನೆಗೆ ಹಾನಿ ಆಗಿರುವುದು. | Kannada Prabha

ಸಾರಾಂಶ

ಮನೆಯಲ್ಲಿನ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಹಾನಿಯಾದ ಘಟನೆ ಉಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.

ಕನ್ನಡ ಪ್ರಭ ವಾರ್ತೆ ಮುಧೋಳ

ಮನೆಯಲ್ಲಿನ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಹಾನಿಯಾದ ಘಟನೆ ಉಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಆಗಿಲ್ಲ.ಸಿಲೆಂಡರ್ ಸ್ಫೋಟವಾದ ಮನೆಯಲ್ಲಿ ಭಾಗವ್ವ ಚಿನ್ನಪ್ಪ ಮುಂಡಗನೂರು (70), ಮಾಯವ್ವ ಕುರೆನ್ನವರ (38), ಶಿವಲೀಲಾ ಮುಂಡಗನೂರು (23), ಹೇಮಾ ಮುಂಡಗನೂರು (19), ಮಂಜುನಾಥ ಮುಂಡಗನೂರು (14), ಲಕ್ಷ್ಮಿ ಮುಂಡಗನೂರು (16), ಸರೋಜಾ ಸಿದ್ದಪ್ಪ ಮುಂಡಗನೂರು(28), ಸಿದ್ದಪ್ಪ ಚಿನ್ನಪ್ಪ ಮುಂಡಗನೂರು (37), ಶಿವಾನಂದ ಮುಂಡಗನೂರು (14) ಇದ್ದರೆಂದು ಹೇಳಲಾಗುತ್ತಿದ್ದು, ಇದರಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲವೆಂದು ತಿಳಿದುಬಂದಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣ ಕಿತ್ತುಹೋಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ