ಶಕ್ತಿನಗರದಲ್ಲಿ ಇಂದು ಸಹಸ್ರ ಚಂಡಿಕಾ ಯಾಗ

KannadaprabhaNewsNetwork |  
Published : Dec 29, 2025, 03:00 AM IST
ಸಹಸ್ರಚಂಡಿಕಾ ಯಾಗದ ಪೂರ್ವಭಾವಿಯಾಗಿ ನಡೆದ ಧನ್ವಂತರಿ ಹವನ | Kannada Prabha

ಸಾರಾಂಶ

ಶಕ್ತಿ ನಗರ ರಮಾ ಶಕ್ತಿ ಮಿಶನ್ ವತಿಯಿಂದ ಡಿ.29ರಂದು ಸೋಮವಾರ ಬೆಳಗ್ಗೆ 7ರಿಂದ ಸಹಸ್ರ ಚಂಡಿಕಾ ಯಾಗ ಪ್ರಾರಂಭ, ಬೆಳಗ್ಗೆ 11ಕ್ಕೆ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ, ಬಳಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ

ಮಂಗಳೂರು: ಶಕ್ತಿನಗರದ ರಮಾ ಶಕ್ತಿ ಮಿಷನ್‌ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಅಪರೂಪದ ಹಾಗೂ ಅತ್ಯಂತ ಶಕ್ತಿಶಾಲಿ ವೈದಿಕ ಯಾಗವಾದ ಸಹಸ್ರ ಚಂಡಿಕಾಯಾಗದ ಪೂರ್ವಭಾವಿಯಾಗಿ ಭಾನುವಾರ ಧನ್ವಂತರಿ ಹೋಮ ಹಾಗೂ ವೈದಿಕ ಕಾರ್ಯಕ್ರಮಗಳು ಭಾನುವಾರ ನೆರವೇರಿತು. ಬೆಳಗ್ಗೆ ಗೋಪೂಜೆ, ಗುರು ಪ್ರಾರ್ಥನೆ, ಚಂಡೀ ಪುರಶ್ಚರಣೆ, ನವಾವರಣ ಪೂಜೆ ನಡೆದು, ಧನ್ವಂತರಿ ಹೋಮ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನಡೆದು, ಸುವಾಸಿನಿ ಪೂಜೆ ನಡೆಯಿತು. ಸಂಜೆ ನವಾಕ್ಷರೀ ಮಂತ್ರ ಜಪ, ಲಲಿತಾ ಸಹಸ್ರನಾಮ ಪಾರಾಯಣ ಸೇವೆ, ಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆ ಸಂಪನ್ನಗೊಂಡಿತು. ಬೋಳೂರಿನ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಸಾನಿಧ್ಯ ವಹಿಸಿದ್ದರು. ದಿನವಿಡೀ ನಡೆದ ವಿವಿಧ ಸೇವೆಗಳಲ್ಲಿ 8,000ಕ್ಕೂ ಅಧಿಕ ಭಕ್ತರು ಭಾಗವಹಿಸಿ, ತೀರ್ಥ, ಅನ್ನಪ್ರಸಾದ ಸ್ವೀಕರಿಸಿ ದೇವರ ಅನುಗ್ರಹ ಪಡೆದರು.ಪದವು ಫ್ರೆಂಡ್ಸ್‌ ಕ್ಲಬ್‌ ಶಕ್ತಿನಗರ, ಆದಿಶಕ್ತಿ ಮಹಿಳಾ ಮಂಡಳಿ ಗುಂಡಳಿಕೆ, ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿ ನೀತಿನಗರ, ರಾಜೀವನಗರ ನಾಗಬ್ರಹ್ಮ ಸೇವಾ ಸಮಿತಿ ಸೇರಿದಂತೆ ವಿವಿಧ ತಂಡಗಳು ಸಹಕರಿಸಿದವು.

ಇಂದು ಸಹಸ್ರ ಚಂಡಿಕಾ ಯಾಗಡಿ.29ರಂದು ಸೋಮವಾರ ಬೆಳಗ್ಗೆ 7ರಿಂದ ಸಹಸ್ರ ಚಂಡಿಕಾ ಯಾಗ ಪ್ರಾರಂಭ, ಬೆಳಗ್ಗೆ 11ಕ್ಕೆ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ, ಬಳಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!
ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।