ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರು ಬೇಗ ಗುಣಮುಖರಾಗಿ, ಜನಸೇವೆಗೆ ಬರಲಿ ಎಂದು ಬಿಜೆಪಿ ಮುಖಂಡ ದತ್ತಾ ಬಂಡೇನವರ ಇಂಡಿ ಪಟ್ಟಣದ ಆರಾಧ್ಯ ದೇವರಾದ ಶ್ರೀದುರ್ಗಾ ದೇವಿ ದೇವಸ್ಥಾನದಿಂದ ಅಗಸಿ ಹನುಮಾನ ದೇವರಿಗೆ ದೀಡ ನಮಸ್ಕಾರ ಹರಕೆ ಹೊತ್ತಿದ್ದು, ಇಂದು ಅಭಿಮಾನಿಗಳ ಸಮ್ಮುಖದಲ್ಲಿ ದಿಡ ನಮಸ್ಕಾರ ಹಾಕಿ ಹರಕೆ ತಿರಿಸಿದರು. ಈ ಸಂದರ್ಭದಲ್ಲಿ ಶಾಂತು ಭಾವಿಕಟ್ಟಿ, ಶಿವಾನಂದ ಬಗಲಿ, ಪ್ರಕಾಶ ಮನಗೂಳಿ, ಸತೀಶ ಬೋಳೆಗಾಂವ್, ರಮೇಶ ಧರೇನವರ್, ಬಸವರಾಜ ಶಿರನಾಳ, ವಿಜಯಕುಮಾರ ಪಾರ್ಶಿ, ಅಶೋಕ ಪೈಲ್ವಾನ್, ಅಂಬಣ್ಣಾ ಭಾವಿಕಟ್ಟಿ ಇತರರು ಇದ್ದರು.