ಸೇವಾ ಮನೋಭಾವ, ಪರೋಪಕಾರ ಕ್ಷೀಣ

KannadaprabhaNewsNetwork |  
Published : Mar 30, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್ | Kannada Prabha

ಸಾರಾಂಶ

ಚಿತ್ರದುರ್ಗ ಬಂಧಿಖಾನೆಯಲ್ಲಿನ ಖೈದಿಗಳಿಗೆ ಬೆಂಗಳೂರಿನ ಕಾಲಿಂಗ್ ಏರೋಸ್ಪೇಸ್ ಕಂಪನಿಯಿಂದ ಆಯೋಜಿಸಿದ್ದ ವಿವಿಧ ಸಲಕರಣೆಗಳ ವಿತರಣಾ ಸಮಾರಂಭವನ್ನು ಪಿ.ವೈ.ದೇವರಾಜ್‌ಪ್ರಸಾದ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಲ್ಲೆಡೆ ಸ್ವಾರ್ಥ ತುಂಬಿ ತುಳುಕುತ್ತಿದ್ದು, ಸೇವಾ ಮನೋಭಾವನೆ, ಪರೋಪಕಾರ ಮನೋಭಾವ ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಾನಿಕ ಆಯುಕ್ತ ಪಿ.ವೈ.ದೇವರಾಜ್‌ಪ್ರಸಾದ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಬಂಧಿಖಾನೆಯಲ್ಲಿನ ಖೈದಿಗಳಿಗೆ ಬೆಂಗಳೂರಿನ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ಹಮ್ಮಿಕೊಂಡಿದ್ದ ವಿವಿಧ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ-ಜಾತಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ದೇಶಭಕ್ತಿ, ಐಕ್ಯತೆ ನಶಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ನೀರಿನ ಘಟಕ ಇನ್ನಿತರೆ ಸಲಕರಣೆಗಳನ್ನು ನೀಡಿರುವುದು ನಿಜಕ್ಕೂ ಅರ್ಥಪೂರ್ಣವಾದುದು ಎಂದರು.

ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಎಸಗಿ ಇಲ್ಲಿಗೆ ಬಂದಿದ್ದೀರ. ನಿಮ್ಮ ನಡವಳಿಕೆಗಳನ್ನು ತಿದ್ದಿಕೊಂಡು ಹೊರಗೆ ಹೋದ ಮೇಲೆ ಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ಕಟ್ಟಿಕೊಳ್ಳಿ. ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ ಎಂದು ಖೈದಿಗಳಿಗೆ ಕಿವಿಮಾತು ಹೇಳಿದರು.

ಕಾಲಿಂಗ್ ಏರೋಸ್ಪೇಸ್ ಕಂಪನಿಯ ಕರಣ್ ಮಾತನಾಡಿ, ಸಮಾಜಕ್ಕೆ ಏನಾದರೂ ಉಪಕಾರಿಯಾಗಬೇಕೆಂಬ ಚಿಂತನೆಯಿಟ್ಟುಕೊಂಡು ಕಂಪನಿಯಿಂದ ನಿಮಗೆ ಕೆಲವು ಸಲಕರಣೆಗಳನ್ನು ವಿತರಿಸಿದ್ದೇವೆ. ಲೈಬ್ರರಿಯಲ್ಲಿ ಸಿಗುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ನೀವು ಕುಟುಂಬವನ್ನು ಬಿಟ್ಟು ಜೈಲಿನಲ್ಲಿರುವುದೇ ನಿಮಗೆ ದೊಡ್ಡ ಶಿಕ್ಷೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೆ ಆದ ಹಕ್ಕಿದೆ. ಹಾಗಂತ ಸ್ವೇಚ್ಚಾಚಾರವಾಗಿ ವರ್ತಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ರುದ್ರಮುನಿ ಮಾತನಾಡಿ, ಐಟಿ, ಬಿಟಿಯಲ್ಲಿ ಕೆಲಸ ಮಾಡುವವರಿಗೆ ಒತ್ತಡಗಳಿರುತ್ತವೆ. ಆದಾಗ್ಯೂ ಜೈಲಿನಲ್ಲಿರುವ ಖೈದಿಗಳಿಗೆ ಏನಾದರೂ ಅನುಕೂಲ ಒದಗಿಸಬೇಕೆಂಬ ಮಹದಾಸೆಯಿಟ್ಟುಕೊಂಡು ಶುದ್ದ ನೀರಿನ ಘಟಕ ಹಾಗೂ ಬ್ಯಾಗ್‌ಗಳನ್ನು ವಿತರಿಸಿ ಮಾನವೀಯತೆ ಮೆರೆಯಲಾಗಿದೆ ಎಂದರು.

ಕಾಲಿಂಗ್ ಏರೋಸ್ಪೇಸ್ ಕಂಪನಿಯ ನಾಗವೇಣಿ , ಸಮಾಜ ಸೇವಕಿ ಗಾಯತ್ರಿ ಶಿವರಾಂ, ವೈ.ಬಿ.ಮಹೇಂದ್ರನಾಥ್, ನಾಗರಿಕ ಬಂದೂಕು ತರಬೇತಿ ಶಿಬಿರದ ಮಹಮದ್‌ಆಲಿ, ಜೈಲರ್ ರಾಜೇಂದ್ರ ಕೋರ್ಪಡೆ, ಸಹಾಯಕ ಜೈಲರ್‌ಗಳಾದ ರಾಮಣ್ಣ ಹರ‍್ಕಲ್ ಮಡಿವಾಳಪ್ಪ, ಕಾಲಿಂಗ್ ಏರೋಸ್ಪೇಸ್ ಕಂಪನಿಯ ಪುರುಷೋತ್ತಮ್, ರಾಘವೇಂದ್ರ, ಪಾಲ್ಗುಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪರಿಷತ್ ಸದಸ್ಯ ಬಸವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದೂರು ಮಾದರಿ ಪಟ್ಟಣವಾಗುವತ್ತ ಅಭಿವೃದ್ಧಿಯ ಓಟ
ಭೂಮಿ ಇರುವವರೆಗೂ ರಂಗಭೂಮಿ ಜೀವಂತ