ಕನ್ನಡಪ್ರಭ ವಾರ್ತೆ ಸವದತ್ತಿ
ಈ ಸಂದರ್ಭದಲ್ಲಿ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಮಾಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ ನಗರದ ಎಲ್ಲ ಹಿರಿಯರು, ಮಹಿಳೆಯರು ಮತ್ತು ಯುವಕರು ಸೇರಿಕೊಂಡು ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಬಾಣಿಕಟ್ಟೆಯನ್ನು ನಿರ್ಮಿಸಿರುವುದು ಅತ್ಯಂತ ಸಂತಸ ಮೂಡಿಸಿದೆ. ಪ್ರಾರಂಭಿಕವಾಗಿ ಜಾತ್ರೆಗೂ ಮುನ್ನ ಏನೆಲ್ಲಾ ತಯಾರಿ ಮಾಡಬೇಕೆಂಬುದನ್ನು ಈ ಭಾಗದ ಜನರು ಅದ್ದೂರಿಯಾಗಿ ಹಮ್ಮಿಕದ್ಡು ಜಾತ್ರಾ ಮಹೋತ್ಸವ ಪ್ರಾರಂಭಕ್ಕೆ ಸಕಲ ಅನುಕೂಲತೆ ಒದಗಿಸಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸವದತ್ತಿಯ ಗ್ರಾಮದೇವಿಯ ಜಾತ್ರೆಗೆ ಎಲ್ಲ ಸಮುದಾಯದ ಮತ್ತು ಧರ್ಮದವರನ್ನು ಸೇರಿಸಿಕೊಂಡು ಅವರೆಲ್ಲರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಜಾತ್ರೆಯ ಸಿದ್ಧತೆ ಕುರಿತು ಅಡಿವೆಪ್ಪ ಬೀಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಶ್ವತ್ಥ್ ವೈದ್ಯ, ಎಲ್.ಆರ್.ಕುಲಕರ್ಣಿ, ಸುಭಾಸ ರಜಪೂತ, ಶಿವಾನಂದ ಹೂಗಾರ, ಅಲ್ಲಮಪ್ರಭು ಪ್ರಭುನವರ, ಪುಂಡಲೀಕ ಭೀ.ಬಾಳೋಜಿ, ರಾಜಶೇಖರ ಕಾರದಗಿ, ಭರಮಪ್ಪ ಅಣ್ಣಿಗೇರಿ, ಬಿ.ಎನ್.ಪ್ರಭುನವರ, ವೈ.ವೈ.ಕಾಳಪ್ಪನವರ, ವಿರುಪಾಕ್ಷಪ್ಪ ಹೆರಕಲ್ಲ, ಅಶೋಕ ಹೊಂಗಲ, ಶಂಕರ ತುಪ್ಪದ, ಅಜ್ಜಪ್ಪ ಕೊಣ್ಣೂರ, ಮಹಾದೇವ ದೊಡ್ಡಹುಬ್ಬಳ್ಳಿ, ಸತ್ಯೆಪ್ಪ ಸೋಮನ್ನವರ, ನಿಂಗಪ್ಪ ಮೊರಬದ, ಗದಿಗೆಪ್ಪ ದಾನಗೊಂಡ, ಜೀವಪ್ಪ ಮಜ್ಜಗಿ, ಮಲ್ಲಿಕಾರ್ಜುನ ಹನಸಿ, ಚನಬಸಪ್ಪ ನವಲಗುಂದ, ಸಂತೋಷ ಮುತಗೊಂಡ, ಅಂಬೇಡ್ಕರ ನಗರದ ಪುಂಡಲೀಕ ಮಾದರ, ಸಾಬಣ್ಣ ಜಂಬುದೀಪ, ದುರ್ಗಪ್ಪ ಜಂಬುದೀಪ, ಯಲ್ಲಪ್ಪ ಜಂಬುದೀಪ, ಫಕ್ಕಿರಪ್ಪ ಮಾದರ, ವಾಸು ಜಂಬುದೀಪ, ರುದ್ರಪ್ಪ ಚಲವಾದಿ, ಚಂದ್ರು ಹಿರೇಕೆಂಚಮ್ಮನವರ, ಸುಭಾಸ ಜಂಬುದೀಪ, ವಸಂತ ಹಿರೇಮನಿ, ಮಾರುತಿ ಹಿರೇಕೆಂಚಮ್ಮನವರ, ಹನಮಂತ ಖ್ಯಾತನ್ನವರ ಮುಂತಾದವರು ಉಪಸ್ಥಿತರಿದ್ದರು.