ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ ಉನ್ನತ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಆಯ್ಕೆಯಾದವರಲ್ಲಿ ವಿಜಯಪುರ/ಬಾಗಲಕೋಟೆ ಜಿಲ್ಲೆಯ ಪ್ರಥಮ ನಿರ್ಣಾಯಕರೆಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಟೆನ್ನಿಸ್ಬಾಲ್ ಕ್ರಿಕೇಟ್ ಚಾಂಪಿಯನಶಿಪ್ನಲ್ಲಿ, ಹಿಮಾಚಲಪ್ರದೇಶದ ಕುಲ್ಲು, ಉತ್ತರ ಪ್ರದೇಶದ ವಾರಣಾಸಿ, ಬಿಹಾರ, ಗುಜರಾತ, ಚೆನ್ನೈ, ಗೋವಾದಲ್ಲಿ ಈಗಾಗಲೇ ಅಂಪೈರ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಜಯಪುರದ ಖ್ಯಾತ ಕ್ರಿಕೇಟ್ ಪಟು ಡಾ.ಅಶೋಕಕುಮಾರ ಜಾಧವ ಅವರ ಮಾರ್ಗದರ್ಶನದಲ್ಲಿ ಈ ಮಹೋನ್ನತ ಸಾಧನೆಗೈದ ಇವರಿಗೆ ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ ವಿಜಯಪುರದ ಸಂಯೋಜಕ ಎನ್.ಎಂ. ಹುಟಗಿ, ದೇವರಹಿಪ್ಪರಗಿಯ ಮಾಜಿ ಆಟಗಾರರಾದ ಶ್ರೀಧರನಾಡಗೌಡ, ರಮೇಶ ಮಸಬಿನಾಳ, ಪ್ರಕಾಶ ಮಲ್ಲಾರಿ.ಮುನ್ನಾ ಮಳಖೇಡ,ಜಬ್ಬಾರ್ ಪಾನಪುರೋಷ್, ರಾಘು ಗುಡಿಮನಿ,
ರಮೇಶ ಮ್ಯಾಕೆರಿ, ಪಿ.ಸಿ. ತಲಕೇರಿ, ನಜೀರ್ ಕಲಕೇರಿ, ಹುಚ್ಚಪ್ಪ ಶಿರಸ್ಯಾಡ, ರಾಜು ಕಾಖಂಡಕಿ, ಕೆ.ಎರ್ಶರ್, ಸಿ.ಎ. ಸಂಯೋಜಿತ ಕ್ರಿಕೇಟ್ ಕ್ಲಬ್ಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಆಟಗಾರರು ಅಭಿನಂದಿಸಿದ್ದಾರೆ.