- ಶಿವಮೊಗ್ಗ-ದಾವಣಗೆರೆ ಅವಳಿ ಜಿಲ್ಲೆಗಳಲ್ಲಿ ಅಕ್ರಮ ದಂಧೆ ತಡೆಗಟ್ಟದ ಜಿಲ್ಲಾಡಳಿತ, ಗಣಿ ಅಧಿಕಾರಿಗಳು: ಆರೋಪ - - -
ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಗಡಿಯ ತುಂಗಭದ್ರಾ ನದಿಯಲ್ಲಿ 3 ವರ್ಷಗಳಿಂದಲೂ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕುವಂತೆ ಉಭಯ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಿಂಬೆಗುಂದಿ, ದಾವಣಗೆರೆ ಜಿಲ್ಲೆಯ ಮಳಲಿ ಗ್ರಾಮಗಳ ಮಧ್ಯೆ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಉಭಯ ಜಿಲ್ಲಾಡಳಿತ, ಗಣಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದರು.ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಮೆಂಟ್ ಪೈಪ್ಗಳ ಹಾಕಿ, ಕಲ್ಲು, ಮಣ್ಣನ್ನು ಸುರಿದು ತಾತ್ಕಾಲಿಕ ಸೇತುವೆಯನ್ನೇ ನಿರ್ಮಿಸಿ ಟ್ರ್ಯಾಕ್ಟರ್ಗಳಲ್ಲಿ ನದಿಯ ಉತ್ಕೃಷ್ಟ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಭಾನುವಾರ ನೆಪಮಾತ್ರಕ್ಕೆ, ತೋರಿಕೆಗೆಂಬಂತೆ ಅಧಿಕಾರಿಗಳು ನದಿ ಬಳಿಗೆ ದಾಳಿ ಮಾಡಿದ್ದು ಬಿಟ್ಟರೆ, ಅಕ್ರಮ ಮರಳುಗಾರಿಕೆ ತಡೆಯುವ ಯಾವುದೇ ಕಠಿಣ ಕ್ರಮ ಉಭಯ ಜಿಲ್ಲಾಡಳಿತಗಳಿಂದ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.
ಹೊನ್ನಾಳಿ ತಾಲೂಕಿನ ಬಿದರಗಡ್ಡೆಯಲ್ಲಿ ಉತ್ಕೃಷ್ಟ, ಒಳ್ಳೆಯ ಮರಳು ಸಿಗುತ್ತದೆ. ಇಂದಿಗೂ ಅಲ್ಲಿ ಟೆಂಡರ್ ಮಾಡಿಲ್ಲ. ಇಂದಿಗೂ ಬ್ಲಾಕ್ ಹರಾಜು ಮಾಡದ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ ಅಧಿಕಾರಿಗೂ ಹೇಳಿದ್ದೇವೆ. ಯಾಕೆ ಹರಾಜು ಮಾಡುತ್ತಿಲ್ಲ? ಬಿದರಗಡ್ಡೆ ಬ್ಲಾಕ್ ಆಕ್ಷನ್ ಮಾಡಿ. ಸರ್ಕಾರಿ ಕೆಲಸದ ನೆಪ ಮಾಡಿಕೊಂಡು ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದೇವೆನ್ನುತ್ತಾರೆ. ಆದರೆ, ಲ್ಯಾಂಡ್ ಆರ್ಮಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸವೇ ಇಲ್ಲ. ಲ್ಯಾಂಡ್ ಆರ್ಮಿಗೆ ಒಂದು ಬ್ಲಾಕ್ ಇದ್ದರೂ ಉರುಳಹಳ್ಳಿ ಬ್ಲಾಕ್ ಲ್ಯಾಂಡ್ ಆರ್ಮಿಗೆ ನೀಡಿದ್ದಾರೆ. ಬಿದರಗಡ್ಡೆ ಹೆಸರಷ್ಟೇ ಲ್ಯಾಂಡ್ ಆರ್ಮಿಯದ್ದು ಎಂದು ಅವರು ಟೀಕಿಸಿದರು.
(ಕೋಟ್)
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
-8ಕೆಡಿವಿಜಿ4: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -8ಕೆಡಿವಿಜಿ9: ತುಂಗಭದ್ರಾ ನದಿಗೆ ಅಡ್ಡಲಾಗಿ ಅಕ್ರಮ ಸೇತುವೆ ನಿರ್ಮಿಸಿರುವುದು.. -8ಕೆಡಿವಿಜಿ10, 11, 12, 13: