ಕನ್ನಡಪ್ರಭ ವಾರ್ತೆ ರಾಯಚೂರು
ಸುಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸುಮಾರು 50 ಕೋಟಿ ರು. ವೆಚ್ಚದ ನೀರು ಸಂಗ್ರಹಣಾ ಜಲಾಶಯ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಗುರುವಾರ ಆಶೀರ್ವಚನ ನೀಡಿದ ಶ್ರೀಗಳು. ರಾಯರ ದರ್ಶನ ಪಡೆಯುವುದಕ್ಕಾಗಿ ದೇಶ-ವಿದೇಶಗಳಿಂದ ಅಸಂಖ್ಯಾತ ಭಕ್ತರು ಮಂತ್ರಾಲಯಕ್ಕೆ ಬರುತ್ತಿದ್ದು, ಅವರುಗಳಿಗೆ ನೀರಿನ ತೊಂದರೆ ಉಂಟಾಗುತ್ತಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಎದುರಾಗದಂತೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ನೀರು ಸಂಗ್ರಹಣಾ ಜಲಾಶಯ ನಿರ್ಮಾಣದ ಸಂಕಲ್ಪ ಮಾಡಿ, ಸುಮಾರು 30 ವರ್ಷದಗಳ ದೂರದೃಷ್ಠಿಯನ್ನಿಟ್ಟುಕೊಂಡು ಶ್ರೀಮಠಕ್ಕೆ ಸೇರಿದ 40 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಹಿಂದುಸ್ತಾನ್ ಏರೋನೆಟಿಕ್ಸ್ ಲಿಮಿಟೆಡ್ ಸಂಸ್ಥೆ(ಎಚ್ಎಎಲ್)ನ ಸಾಮಾಜಿಕ ಹೊಣೆಗಾರರಿಕೆ ಚಟುವಟಿಕೆಯ ಅನುದಾನದಡಿ (ಸಿಎಸ್ಆರ್) 50 ಕೋಟಿ ವೆಚ್ಚದಲ್ಲಿ ಈ ಜಲಾಶಯವನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದ್ದು, ಯೋಜನೆಯ ವೆಚ್ಚ ಹಾಗೂ ತಾಂತ್ರಿಕ ಸಲಹೆ, ವಿನ್ಯಾಸದ ಜವಾಬ್ದಾರಿಯನ್ನು ಬೆಂಗಳೂರಿನ ಇಐ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್ (ಇಐಟಿ) ಸಂಸ್ಥೆಗೆ ವಹಿಸಿಕೊಂಡಿದೆ. ಈ ಯೋಜನೆ ಅನುಷ್ಠಾನಗೊಳಿಸಲು 18 ತಿಂಗಳು ಕಾಲಾವಕಾಶ ಪಡೆಯಲಾಗಿದೆ. ಈ ಜಲಾಶಯನದಿಂದ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಪರಿಹಾರವಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೂ ಅನುಕೂಲವಾಗಲಿದೆ ಎಂದರು.
ಬೆಂಗಳೂರಿನ ಇಐ ಟೆಕ್ನಾಲಜಿಸ್ನ ಮುಖ್ಯಸ್ಥ ರಂಗನಾಥ ಮಾತನಾಡಿ, ಮಂತ್ರಾಲಯದಲ್ಲಿ ನೀರಿನ ಸಂಗ್ರಹಣಾ ಜಲಾಶಯದ ನಿರ್ಮಾಣದ ಯೋಜನೆಯು ಅತ್ಯಂತ ಮಹತ್ವದ್ದಾಗಿದ್ದು, ಯಾರೊಬ್ಬರ ಶ್ರಮದಿಂದ ಇದು ಸಾಧ್ಯವಾಗುವುದಿಲ್ಲ, ಇದಕ್ಕೆ ಶ್ರೀಗುರುರಾಯರ ಆರ್ಶೀವಾದ, ಪೀಠಾಧಿಪತಿಗಳ ಸಂಕಲ್ಪದಿಂದ ಇಂಥಹ ಯೋಜನೆಗಳು ಕಾರ್ಯಗತಗೊಳ್ಳಲಿದ್ದು, ಈ ಯೋಜನೆಗೆ ಎಚ್ಎಎಲ್ ಸಂಸ್ಥೆಯು ಮುಂದೆ ಬಂದಿರುವುದು ಮತ್ತೊಂದು ಸೌಭಾಗ್ಯವೇ ಸರಿ ಎಂದರು.ಇದಕ್ಕು ಮುನ್ನ ಎಚ್ಎಎಲ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ ಅವರು ನೀರು ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವ್ಯಾಸ ತೀರ್ಥ ಜಲಾಶಯವೆಂದು ನಾಮಕರಣ: