ದಾಯಾದಿಗಳ ಕಲಹಕ್ಕೆ ಜೋಳದ ಬೆಳೆಯೇ ನಾಶ

KannadaprabhaNewsNetwork |  
Published : Jul 11, 2025, 11:48 PM IST
11ಎಚ್ಎಸ್ಎನ್8 :  | Kannada Prabha

ಸಾರಾಂಶ

ಬೆಳಗ್ಗೆ ಯಾರೂ ಇಲ್ಲದ ವೇಳೆ ಜಮೀನಿಗೆ ನುಗ್ಗಿ ಈ ಕೃತ್ಯವ್ಯಸಗಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ನಮ್ಮ ನಡುವೆ ಕೆಲ ಗೊಂದಲಗಳಿದ್ದು, ಇದರ ನಡುವೆ ನಾನು ಭೂಮಿ ಉಳಿಮೆ ಮಾಡುತ್ತಿದ್ದೇನೆ. ಅದನ್ನು ವಿರೋಧಿಸಿದ ನನ್ನ ಅಣ್ಣನ ಕುಟುಂಬ ಕೃತ್ಯ ಎಸಗಿದ್ದಾರೆ.

ಬೇಲೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಳೆದುನಿಂತಿದ್ದ ಜೋಳ ಬೆಳೆಯನ್ನು ನಾಶ ಮಾಡಿರುವ ಘಟನೆ ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವಿ ಎಂಬುವರು ತಮ್ಮ ಕೂಡು ಕುಟುಂಬದ ಆಸ್ತಿಯಲ್ಲಿ ಬೆಳೆದಿದ್ದ ಜೋಳದ ಬೆಳೆಯನ್ನು ಅವರ ಅಣ್ಣ ರಂಗಸ್ವಾಮಿ ಕುಟುಂಬಸ್ಥರು ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗ್ಗೆ ಯಾರೂ ಇಲ್ಲದ ವೇಳೆ ಜಮೀನಿಗೆ ನುಗ್ಗಿ ಈ ಕೃತ್ಯವ್ಯಸಗಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ನಮ್ಮ ನಡುವೆ ಕೆಲ ಗೊಂದಲಗಳಿದ್ದು, ಇದರ ನಡುವೆ ನಾನು ಭೂಮಿ ಉಳಿಮೆ ಮಾಡುತ್ತಿದ್ದೇನೆ. ಅದನ್ನು ವಿರೋಧಿಸಿದ ನನ್ನ ಅಣ್ಣನ ಕುಟುಂಬ ಕೃತ್ಯ ಎಸಗಿದ್ದಾರೆ. ಬೆಳೆದು ನಿಂತ ಬೆಳೆ ಹಾಳು ಮಾಡುವ ಬದಲು ನಾಲ್ವರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಇದೀಗ ಸಾವಿರಾರು ರು.ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಕೃತ್ಯ‌ ಎಸಗಿದವರ ವಿರುದ್ಧ ಕ್ರಮ ಆಗಬೇಕು ಎಂದು ಬೆಳೆ ಕಳೆದುಕೊಂಡ ರವಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!