ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಬಳಿಯ ಕರಾಳ ದೃಶ್ಯ। ಮಹರಾಷ್ಟ್ರದ ಕೂಲಿ ಕಾರ್ಮಿಕರಿವರು
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗೇಟ್ ಹತ್ತಿರ ಇರುವ ಇದ್ದಿಲು ಸುಡುವ ಭಟ್ಟಿಗಳಲ್ಲಿನ ಮಕ್ಕಳ ಬದುಕು ಕರ್ರಗಾಗುತ್ತಿದೆ. ಶಿಕ್ಷಣ ಪಡೆಯಬೇಕಾದ ವಯಸ್ಸಿನ ಮಕ್ಕಳು ತಮ್ಮ ತಂದೆ ತಾಯಂದಿರ ಕಾಯಕದ ಜೊತೆ ತಮ್ಮ ಬದುಕನ್ನು ಸುಟ್ಟುಕೊಳ್ಳುತ್ತಿದ್ದಾರೆ.ನೆರೆಯ ಮಹಾರಾಷ್ಟ್ರಕ್ಕೆ ಸೇರಿರುವ ಪೂನಾ ಹತ್ತಿರ ಇರುವ ಕಪೋಲ ಎಂಬ ಊರಿನವರಾದ ಕೂಲಿಕಾರ್ಮಿಕರು ಇದ್ದಿಲ ಭಟ್ಟಿಗಳಲ್ಲಿ ದುಡಿಯುತ್ತಿದ್ದಾರೆ. ಯಾವುದೇ ಒಬ್ಬ ಮಗುವು ಆರು ವರ್ಷ ತುಂಬಿದಾಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆದರೆ, ಇಲ್ಲಿ ಬಡ ಕೂಲಿಕಾರ್ಮಿಕರು ತಮ್ಮ ಜೀವನಕ್ಕಾಗಿ ವಲಸೆ ಬರುವಾಗ ಮಕ್ಕಳನ್ನೂ ಕರೆತಂದು ತಮ್ಮ ಕಾಯಕದ ಜೊತೆ ಇಟ್ಟುಕೊಂಡಿದ್ದಾರೆ. ಇವರ ಜೋಪಡಿಗಳು ಮನುಷ್ಯರು ಬದುಕುವ ಸ್ಥಳಗಳಾಗಿ ಉಳಿದಿಲ್ಲ.
ಶಿಕ್ಷಣ ಪಡೆಯಲು ಎಲ್ಲಾ ಮಕ್ಕಳಿಗೂ ಸಂವಿಧಾನದಲ್ಲಿ ಅವಕಾಶ ಇದೆ. ಇದಕ್ಕೆ ಭಾಷೆ, ಮತ, ಗಡಿಗಳ ಮಿತಿಯಿಲ್ಲ. ಸುಮಾರು ಆರು ವರ್ಷದ ಹತ್ತು ಮೂರರಿಂದ ನಾಲ್ಕು ವರ್ಷದ ಹತ್ತು ಮಕ್ಕಳು ಇಲ್ಲಿದ್ದಾರೆ. ಶಾಲಾ ಅಂಗಳದಲ್ಲಿ ಆಟ ಆಡುತ್ತಾ ನಲಿದಾಡುವ ವಯಸ್ಸಿನಲ್ಲಿ ಬಿರು ಬಿಸಿಲಲ್ಲಿ ಇದ್ದಿಲ ಭಟ್ಟಿಗಳ ಅಂಗಳದಲ್ಲಿ ತಮ್ಮ ಬದುಕುಗಳನ್ನೇ ಪಣಕ್ಕಿಟ್ಟವರಂತೆ ಆಟ ಆಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ.
-----
ಮಹಾರಾಷ್ಟ್ರ, ಬಿಹಾರದಿಂದ ಕೂಲಿಕಾರ್ಮಿಕರಾಗಿ ಬಂದಿರುವ ಕೂಲಿಕಾರರ ಮಕ್ಕಳು ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ವಲಸೆ ಬಂದಿರುವ ಪೋಷಕರ ಜೊತೆ ಇಲ್ಲಿದ್ದಾರೆ. ಇಂತಹ ಮಕ್ಕಳ ಶಿಕ್ಷಣಕ್ಕೆ ಗುಡಾರ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿವರೆಗೂ ಸಮೀಪದ ಕಮ್ಮತ್ ಮರಿಕುಂಟೆ ಸರ್ಕಾರಿ ಶಾಲೆಗೆ ಹೋಗಲು ಹೇಳಿದ್ದೇವೆ. ಆದರೆ, ಭಾಷಾ ಸಮಸ್ಯೆ. ಕನಿಷ್ಠ ಕಲಿಕಾ ವಾತಾವರಣದಲ್ಲಿ ಮಕ್ಕಳು ಇರಬೇಕೆಂಬುದು ನಮ್ಮ ಉದ್ದೇಶ. ಆದರೂ ಮಕ್ಕಳು ಹೋಗುತ್ತಿಲ್ಲ.
--------------
ಕಟ್ಟಿಗೆ ಸುಟ್ಟು ಇದ್ದಿಲು ಮಾಡುತ್ತಿರುವ ಕೂಲಿ ಕಾರ್ಮಿಕರು.
----------
ಇದ್ದಿಲು ಭಟ್ಟಿಗಳ ನಡುವೆ ತಮ್ಮ ಶಿಕ್ಷಣ ಮಸುಕಾಗಿಸಿಕೊಂಡಿರುವ ಮಕ್ಕಳು.-------ಫೋಟೋ ಪೈಲ್ ನೇಮ್-19 ಸಿಟಿಡಿ5