ಅವರು ಬುಧವಾರ ಶಿರಾ ನಗರದ ಅಮರಾಪುರ ರಸ್ತೆಯ ಕೊಲ್ಲಾಪುರದಮ್ಮ ದೇವಾಲಯದ ಹಿಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡಾ. ಮಂಜುನಾಥ್ ಮುದ್ದರಾಜು ರವರ ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿ ಆಶೀರ್ವವಚನ ನೀಡಿದರು.

ಶಿರಾ: ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಪಾಲಿಗೆ ಎಲ್ಲಾ ಸೌಲಭ್ಯ ನೀಡುವ ಉದ್ದೇಶದಿಂದ ನಗರದಲ್ಲಿ ಸ್ಥಾಪನೆಯಾಗಿರುವ ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವರದಾನವಾಗಿದ್ದು, ಆಸ್ಪತ್ರೆಗೆ ಬರುವಂಥ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಶಿರಾ ನಗರದ ಅಮರಾಪುರ ರಸ್ತೆಯ ಕೊಲ್ಲಾಪುರದಮ್ಮ ದೇವಾಲಯದ ಹಿಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡಾ. ಮಂಜುನಾಥ್ ಮುದ್ದರಾಜು ರವರ ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿ ಆಶೀರ್ವವಚನ ನೀಡಿದರು. ಅನ್ನದಾತನ ಹೆಸರಿನಲ್ಲಿ ಆಸ್ಪತ್ರೆ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ರೋಗಿಗಳು ಶೀಘ್ರ ಗುಣಮುಖರಾಗುವಂತೆ ಉತ್ತಮ ಚಿಕಿತ್ಸೆ ನೀಡಿ ಶಿರಾ ನಗರಕ್ಕೆ ಈ ಆಸ್ಪತ್ರೆ ಮಾದರಿ ಆಸ್ಪತ್ರೆಯಾಗಲಿ ಎಂದು ಶುಭ ಕೋರಿದರು.

ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ವೈದ್ಯ ಡಾ.ಮಂಜುನಾಥ್ ಮುದ್ದರಾಜು, ಡಾ. ಸೌಮ್ಯ ಮಂಜುನಾಥ್, ಮುಖಂಡರಾದ ಬರಗೂರು ಬಪ್ಪಣ್ಣ, ವೀರನಾಗಪ್ಪ , ಗೌರೀಶ್, ಡಾ. ಉಮಾಶಂಕರ್, ಡಾ.ಚಿದಾನಂದ, ಡಾ. ಅರುಣ್ , ಡಾ. ಶಶಿಕುಮಾರ್ ಸೇರಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಭಕ್ತರು ಹಾಜರಿದ್ದರು.