ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆಕನ್ನಡಪ್ರಭ ವಾರ್ತೆ ಹಳಿಯಾಳ
ಶನಿವಾರ ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ಹಳಿಯಾಳ-ದಾಂಡೇಲಿಯ ಆಯ್ದ 16 ಅಂಗನವಾಡಿಗಳಿಗೆ ಸ್ಮಾರ್ಟ್ಟಿವಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಬಡವರು ಜೀವನ ಸುಖಮಯವಾಗಬೇಕು, ಅವರು ನೆಮ್ಮದಿಯಿಂದ ಜೀವಿಸಬೇಕು ಎಂದರು. ಪಟ್ಟಣವು ಅಭಿವೃದ್ಧಿ ಹೊಂದುತ್ತಿದೆ. ಪಟ್ಟಣವಾಸಿಗಳಿಗೆ ಬೇಕಾದ ಅವಶ್ಯಕ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಪರಿಣಾಮ ಇಂದು ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಶುಚಿತ್ವದ ದೃಷ್ಟಿಯಿಂದ ಇತರೇ ಪಟ್ಟಣಗಳಿಗೆ ಹೊಲಿಕೆ ಮಾಡಿದರೇ ಹಳಿಯಾಳ ಸ್ಥಿತಿ ಉತ್ತಮವಾಗಿದೆ. ಇದನ್ನೇ ಮನಗಂಡು ಇಂದು ಸಾಕಷ್ಟು ಜನ ಹಳಿಯಾಳಕ್ಕೆ ವಲಸೆ ಬಂದು ನೆಲೆಸುತ್ತಿದ್ದಾರೆ ಎಂದರು.ಹಳಿಯಾಳದ ಅಭಿವೃದ್ಧಿಗೆ ಏನು ಬೇಕು ಅದನ್ನೆಲ್ಲಾ ಮಾಡಿದ್ದೇನೆ, ನಿಮ್ಮ ಬಳಿ ಬಡವರ ಮತ್ತು ಮದ್ಯಮ ವರ್ಗದವರ ಕಷ್ಟ ದೂರವಾಗುವ ದಿಸೆಯಲ್ಲಿ ಯೋಜನೆಗಳಿದ್ದರೇ ನನ್ನನ್ನು ಭೇಟಿಯಾಗಿ ಹೇಳಿರಿ ಎಂದರು.
ಗುತ್ತಿಗೆರೆ ಕೆರೆಯಿಂದ ಯಲ್ಲಾಪುರ ನಾಕೆಯವರೆಗೆ ರಸ್ತೆ ವಿಸ್ತರಣೆ ಮತ್ತು ಸ್ಮಾರ್ಟ್ ಬೀದಿ ದೀಪಗಳ ಅಳವಡಿಕೆಯ ಕಾರ್ಯವು ಶೀಘ್ರದಲ್ಲಿ ಆರಂಭಗೊಳ್ಳಲಿದೆ, ಪಟ್ಟಣವಾಸಿಗಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.ಅಕ್ರಮ ಬಡಾವಣೆಗಳಿಗೆ ಅನುಮತಿ ಬೇಡ:
ಹಳಿಯಾಳ ಪಟ್ಟಣ ಬೆಳೆಯುತ್ತಿರುವುದು ಒಂದೆಡೆಯಾದರೇ ಇನ್ನೊಂದೆಡೆ ಹಳಿಯಾಳದಲ್ಲಿ ನೆಲೆಸಲು ಬರುತ್ತಿರುವ ಸಂಖ್ಯೆಯನ್ನು ನೋಡಿ ಇಲ್ಲಿ ಬಡಾವಣೆಗಳ ಸಂಖ್ಯೆಯು ಬೆಳೆಯಲಾರಂಭಿಸಿದೆ. ಇದರಿಂದ ಹಳಿಯಾಳದಲ್ಲಿ ಜಮೀನಿಗೆ ಬಂಗಾರದ ಬೆಲೆ ಬಂದಿದೆ, ಪುರಸಭೆಯವರು ಮೂಲಭೂತ ಸೌಲಭ್ಯ ಒದಗಿಸದ ಬಡಾವಣೆಗಳಿಗೆ ಪರವಾನಿಗೆ ನೀಡಬಾರದು ಎಂದರು.ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಮಾತನಾಡಿ, ರಾಜ್ಯದಲ್ಲಿ ಜಾರಿಯಾಗುವ ಎಲ್ಲಾ ಉನ್ನತ ಮಟ್ಟದ ಯೋಜನೆಗಳನ್ನು ಶಾಸಕ ದೇಶಪಾಂಡೆಯವರು ಹಳಿಯಾಳಕ್ಕೆ ಮಂಜೂರು ಮಾಡಿ ತರುತ್ತಾರೆ. ಅಂತಹ ಸಾಮರ್ಥ್ಯ ಕೇವಲ ಅಭಿವೃದ್ಧಿ ಹಾಗೂ ದೂರದರ್ಶಿತ್ವ ವ್ಯಕ್ತಿತ್ವವುಳ್ಳ ನಾಯಕರಿಗೆ ಮಾತ್ರ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ 86 ಫಲಾನುಭವಿಗಳಲ್ಲಿ, 40 ಪೌರ ಕಾರ್ಮಿಕರಿಗೆ, 34 ಪ.ಜಾತಿಯವರಿಗೆ ಹಾಗೂ 12 ಪ.ಪಂಗಡ ದವರಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆ ಮಾಡಲಾಯಿತು.
ಶಿಶು ಅಭಿವೃದ್ಧಿ ಇಲಾಖೆಯಿಂದ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಆಯ್ದ 16 ಅಂಗನವಾಡಿಗಳಿಗೆ ಸ್ಮಾರ್ಟ ಟಿವಿ ವಿತರಿಸಿದರು. ಬಾಲಭವನ ಸೊಸೈಟಿ ಬೆಂಗಳೂರ ವತಿಯಿಂದ ಮಕ್ಕಳಿಗೆ ಆಯೋಜಿಸಿದ ಸೃಜನಾತ್ಮಕ ಕಲೆ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರವನ್ನು ಶಾಸಕರು ವಿತರಿಸಿದರು.ಪುರಸಭೆಯ ಮಾಜಿ ಸದಸ್ಯರಾದ ಸುರೇಶ ವಗ್ರಾಯಿ, ಸತ್ಯಜಿತ ಗಿರಿ, ಮಾರುತಿ ಕಲಬಾವಿ ಇದ್ದರು. ಶಿಕ್ಷಣ ಇಲಾಖೆಯ ಬಿಆರ್ಪಿ ಎನ್. ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.