ತೆಕ್ಕಾರು ಭಟ್ರಬೈಲು ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

KannadaprabhaNewsNetwork |  
Published : Apr 12, 2025, 12:48 AM IST
ಬ್ರಹ್ಮಕಲಶೋತ್ಸದ ಆಮಂತ್ರಣ ಪತ್ರಿಕೆಯನ್ನು | Kannada Prabha

ಸಾರಾಂಶ

ತೆಕ್ಕಾರು ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತೆ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಏ.೨೫ ರಿಂದ ಮೇ ೩ ರವರೆಗೆ ಬ್ರಹ್ಮಕಲಶೋತ್ಸದ ಆಮಂತ್ರಣ ಪತ್ರಿಕೆಯನ್ನು ಭಕ್ತ ಸಮುದಾಯದ ಸಮ್ಮುಖದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಮುಂಭಾಗದಲ್ಲಿ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇತಿಹಾಸದಲ್ಲಿ ಆಕ್ರಮಣಕ್ಕೆ ಸಿಲುಕಿ ನಾಮಾವಶೇಷಗೊಂಡಿದ್ದ ತೆಕ್ಕಾರು ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತೆ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಏ.೨೫ ರಿಂದ ಮೇ ೩ ರವರೆಗೆ ಬ್ರಹ್ಮಕಲಶೋತ್ಸದ ಆಮಂತ್ರಣ ಪತ್ರಿಕೆಯನ್ನು ಭಕ್ತ ಸಮುದಾಯದ ಸಮ್ಮುಖದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಮುಂಭಾಗದಲ್ಲಿ ಬಿಡುಗಡೆಗೊಳಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ ನಾಯಕ್ ನಾಗರಕೋಡಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ , ಪ್ರಮುಖರಾದ ಪ್ರವೀಣ್ ರೈ, ಅನಂತ ಪ್ರಸಾದ್ ನೈತಡ್ಕ, ತಿಮ್ಮಪ್ಪ ಪೂಜಾರಿ, ಕೇಶವ ಪೂಜಾರಿ ಬಾಗ್ಲೋಡಿ, ಮಂಜುನಾಥ ಸಾಲಿಯಾನ್, ಬಾಬು ಮೂಲ್ಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

೮೦೦ ವರ್ಷಗಳ ಇತಿಹಾಸ ಹೊಂದಿದ್ದ ಈ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಗೋಚರಿಸಿದಂತೆ, ಲಭಿಸಿದ ಕುರುಹುಗಳ, ಭಗ್ನಾವಶೇಷಗಳ ಆಧಾರದಲ್ಲಿ ಮತ್ತೆ ಅದೇ ಸ್ಥಳದಲ್ಲಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ವಿಶೇಷತೆಯೆಂದರೆ ಇಲ್ಲಿನ ದೇವಾಲಯದ ಗರ್ಭಗುಡಿ ಭಕ್ತರ ಸನಿಹದಲ್ಲಿದ್ದು, ಅತೀ ಸನಿಹದಲ್ಲೇ ದೇವರನ್ನು ಪೂಜಿಸಲು ಪ್ರಾರ್ಥಿಸಲು ಅವಕಾಶ ಕಲ್ಪಿಸಲಾಗಿದೆ. ಕಾಲಚಕ್ರಕ್ಕೆ ಸಿಲುಕಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಸ್ಥಳದಲ್ಲಿ ನಡೆಯುತ್ತಿರುವ ದೇವಾಲಯದ ಪುನರ್ ನಿರ್ಮಾಣದಲ್ಲಿ ಪ್ರತಿ ಮನೆಯ ಭಕ್ತಾದಿಗಳು ಅವಿರತ ಶ್ರಮಿಸುತ್ತಿದ್ದು, ಎದುರಿಗಿರುವ ಕಡಿಮೆ ಅವಧಿಯಲ್ಲಿ ಗರಿಷ್ಠ ಕಾರ್ಯಗಳು ನಡೆಯಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ