ಅಗ್ನಿವೀರರ ಮೂರನೇ ಬ್ಯಾಚ್‌ ಭಾರತೀಯ ಸೇನೆಗೆ ನಿಯೋಜನೆ

KannadaprabhaNewsNetwork |  
Published : Apr 18, 2024, 02:17 AM IST
ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 427 ಅಗ್ನಿವೀರರನ್ನು ಒಳಗೊಂಡ 3ನೇ ಬ್ಯಾಚ್ ಬುಧವಾರ ತರಬೇತಿ ಪೂರೈಸಿ ಭಾರತೀಯ ಸೇನೆಗೆ ನಿಯೋಜನೆಗೊಂಡಿತು. | Kannada Prabha

ಸಾರಾಂಶ

ಇಲ್ಲಿನ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 427 ಅಗ್ನಿವೀರರನ್ನು ಒಳಗೊಂಡ 3ನೇ ಬ್ಯಾಚ್ ಬುಧವಾರ ತರಬೇತಿ ಪೂರೈಸಿ ಭಾರತೀಯ ಸೇನೆಗೆ ನಿಯೋಜನೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಲ್ಲಿನ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 427 ಅಗ್ನಿವೀರರನ್ನು ಒಳಗೊಂಡ 3ನೇ ಬ್ಯಾಚ್ ಬುಧವಾರ ತರಬೇತಿ ಪೂರೈಸಿ ಭಾರತೀಯ ಸೇನೆಗೆ ನಿಯೋಜನೆಗೊಂಡಿತು.

ನಗರದ ಮೇಖ್ರಿ ವೃತ್ತದ ಬಳಿಯ ರೆಜಿಮೆಂಟ್‌ನಲ್ಲಿ ಅಗ್ನಿವೀರರು 24 ವಾರಗಳ ತರಬೇತಿ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದರು.

ಅಗ್ನಿವೀರ ಪರೇಡ್ ವೀಕ್ಷಿಸಿದ ಜನರಲ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಮೇಜರ್ ಜನರಲ್ ರವಿ ಮುರುಗನ್ ಮಾತನಾಡಿ, ‘ ಅಗ್ನಿವೀರರು ನಿಷ್ಠೆ, ಪ್ರಾಮಾಣಿಕತೆ ಹಾಗೂ ವೀರತ್ವ ಎಂಬ ಮೂರು ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಅಗ್ನಿವೀರರ ಹೆಮ್ಮೆಯ ಪೋಷಕರನ್ನು ಅಭಿನಂದಿಸಿ, ದೇಶಕ್ಕಾಗಿ ಕೊಡುಗೆ ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಪರೇಡ್‌ ನೇತೃತ್ವವನ್ನು ಮಧ್ಯಪ್ರದೇಶದ ಅಗ್ನಿವೀರ್ ರಿತೇಶ್ ಕುಮಾರ್ ರಾಯ್ ವಹಿಸಿದ್ದರು. ಪ್ರಶಸ್ತಿ ವಿಜೇತರ ಪೈಕಿ ಅಗ್ನಿವೀರ್ ಔರಂಗೇ ರೋಹಿತ್ ಪಾಂಡುರಂಗ್ ಅವರು ಒಟ್ಟಾರೆ ಅತ್ಯುತ್ತಮ ಕೆಡೆಟ್ ಆಗಿ ಗಿಲ್ ಪದಕ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ