ಟಿಎಸ್‌ಎಸ್ ಲೆಕ್ಕದ ಬಗ್ಗೆ ಸರ್ಕಾರದಿಂದಲೇ ತನಿಖೆಯಾಗಲಿ; ರಾಮಕೃಷ್ಣ ಹೆಗಡೆ ಕಡವೆ

KannadaprabhaNewsNetwork |  
Published : Sep 22, 2025, 01:02 AM IST
ಪೊಟೋ21ಎಸ್.ಆರ್‌.ಎಸ್‌3(ಸುದ್ದಿಗೊಷ್ಠಿಯಲ್ಲಿ ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿದರು.) | Kannada Prabha

ಸಾರಾಂಶ

ಸಂಘದ ಹಣವನ್ನು ಸರಿಯಾಗಿ ದುಡಿಸುವುದಕ್ಕೋಸ್ಕರ ಮತ್ತು ಆ ಮೂಲಕ ಸಂಘಕ್ಕೆ ಹೆಚ್ಚಿನ ಆದಾಯ ಕಲ್ಪಿಸುವ ಸದುದ್ದೇಶದಿಂದ ಕಾಯ್ದೆ ಪ್ರಕಾರ ಸಾಲ ನೀಡಲಾಗಿದೆ.

ಶಿರಸಿ: ಅಡಕೆ ಬೆಳೆಗಾರರ ಜೀನವಾಡಿ ಸಂಸ್ಥೆಯಾದ ಟಿಎಸ್‌ಎಸ್ ಲೆಕ್ಕದ ಬಗ್ಗೆ ಸರ್ಕಾರದಿಂದಲೇ ಸಹಕಾರಿ ಕಾಯ್ದೆ ಪ್ರಕಾರ 64ರಲ್ಲಿ ತನಿಖೆಯಾಗಿ ಸದಸ್ಯರಿಗೆ ಸ್ಪಷ್ಟತೆ ಸಿಗಲಿ ಎಂದು ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಒತ್ತಾಯಿಸಿದ್ದಾರೆ.

ಅವರು ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಡತನಾಡಿ, ಸಂಘದ ಹಣವನ್ನು ಸರಿಯಾಗಿ ದುಡಿಸುವುದಕ್ಕೋಸ್ಕರ ಮತ್ತು ಆ ಮೂಲಕ ಸಂಘಕ್ಕೆ ಹೆಚ್ಚಿನ ಆದಾಯ ಕಲ್ಪಿಸುವ ಸದುದ್ದೇಶದಿಂದ ಕಾಯ್ದೆ ಪ್ರಕಾರ ಸಾಲ ನೀಡಲಾಗಿದೆ. ಸಾಲಗಳಿಗೆ ರೈತರಿಗೆ ನೀಡಲ್ಪಡುವ ಸಾಲಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತಿತ್ತು. ಸಾಲ ಪಡೆದ ಜಮೀನುಗಳನ್ನು ಹೂಡಿಕೆ ವಿಭಾಗದಿಂದ ಮಾರಾಟ ಮಾಡಿದಾಗ ಸಂಘಕ್ಕೆ ಕಮಿಷನ್ ರೂಪದಲ್ಲಿಯೂ ಹೆಚ್ಚುವರಿ ಆದಾಯ ಆಗುತ್ತಿತ್ತು. ಇದನ್ನು ಸಂಘದ ಸದಸ್ಯರ ಸೌಲಭ್ಯಗಳಿಗೆ ಬಳಸುತ್ತಿದ್ದೆವು. ನೀಡಿದ ಸಾಲಗಳ ಮರುಪಾವತಿ ವಿಳಂಬವಾದರೆ ಆಡಳಿತ ಮಂಡಳಿ ವಸೂಲಿ ಮಾಡಬೇಕು. ಆದರೆ, ನೀಡಿದ ಸಾಲವನ್ನು ಅವ್ಯವಹಾರ ಎಂದು ಹೇಳುವುದು ಸರಿಯಲ್ಲ. ನ್ಯಾಯಾಲಯದ ಮೊರೆ ಹೋದರೆ ವಸೂಲಿಯೂ ವಿಳಂಬವಾಗಲಿದೆ. ಅವರನ್ನು ಕರೆದು ಮಾತನಾಡಬಹುದಿತ್ತು. ವೈಯಕ್ತಿಕ ದ್ವೇಷದಿಂದ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಸಂಘಕ್ಕೆ ಹಾನಿಯೇ ಹೊರತು, ಲಾಭವಲ್ಲ ಎಂದರು.

ಕೆಡಿಸಿಸಿ ಬ್ಯಾಂಕ್‌ನಿಂದ ಟಿಎಸ್‌ಎಸ್‌ಗೆ ಸಾಲ ನೀಡಿಲ್ಲ ಎಂಬುದಕ್ಕೆ ಅಡಾವೆಯಲ್ಲಿ ಆರ್ಥಿಕ ಸುಸ್ಥಿತಿಯನ್ನು ಪ್ರದರ್ಶಿಸದಿರುವುದೇ ಪ್ರಮುಖ ಕಾರಣ. ಇದಕ್ಕೆ ಈಗಿನ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ದೂಷಿಸುವುದು ಸರಿಯಲ್ಲ ಎಂದು ಕೆಡಿಸಿಸಿ ಹಾಲಿ ನಿರ್ದೇಶಕನಾಗಿಯೂ ಹೇಳುತ್ತೇನೆ. 2023-24ರಲ್ಲಿ ಮೂರು ಬೇರೆ ಬೇರೆ ದಿನಾಂಕಕ್ಕೆ ಮೂರು ಬೇರೆ ಬೇರೆ ಅಂಕಿ-ಅಂಶಗಳನ್ನು ಒಳಗೊಂಡ ಅಡಾವೆ ಪತ್ರಿಕೆಯನ್ನು ನೀಡಿದ್ದು, ಸದಸ್ಯರಿಗೆ, ಸಹಕಾರ ಇಲಾಖೆಗೆ ಮಾಡಿರುವ ಅಪರಾಧದ ಪರಾಕಾಷ್ಠೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ನಿರ್ದೇಶಕರಾದ ಗಣಪತಿ ರಾಯ್ಸದ, ಶಾರದಾ ಹೆಗಡೆ, ಸೀತಾರಾಮ ಹೆಗಡೆ ನೀರ್ನಳ್ಳಿ, ಚಂದ್ರಶೇಖರ ಹೆಗಡೆ ಹೂಡ್ಲಮನೆ, ನಾರಾಯಣ ನಾಯ್ಕ, ನರಸಿಂಹ ಹೆಗಡೆ ಗುಂಡ್ಕಲ್ ಮತ್ತಿತರರು ಇದ್ದರು.

ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಟಿಎಸ್‌ಎಸ್‌ನಿಂದ ನೀಡಲ್ಪಟ್ಟ ₹123 ಕೋಟಿ ಸಾಲ ಸರ್ವ ಸಮ್ಮತಿಯಿಂದ ನಿರ್ಧಾರವಾಗಿ ಕಾಯ್ದೆ ಬದ್ಧವಾಗಿ ಮಂಜೂರಾಗಿದೆ. ಅವರ ಆಸ್ತಿಗಳನ್ನು ಜಾಮೀನಾಗಿ ಪಡೆದಿದ್ದೇವೆ. ಸಾಲ ನೀಡುವುದು ಅವ್ಯವಹಾರ ಎಂದು ಹಾಲಿ ಆಡಳಿತ ಮಂಡಳಿಯು ಬಿಂಬಿಸಲು ಹೊರಟಿದೆ ಎನ್ನುತ್ತಾರೆ ನಿಟಕಪೂರ್ವ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ