ಬಲೆಗೆ ಬೀಳದ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ! ತುಮಕೂರು ಜಿಲ್ಲೆಯ ಯುವಕನ ಸಾಧನೆ

Published : Jan 08, 2025, 11:34 AM IST
leopard

ಸಾರಾಂಶ

ಯುವಕನ್ನೊಬ್ಬ ಚಿರತೆಯ ಬಾಲ ಹಿಡಿದು ಬೋನಿಗೆ ಹಾಕುವ ಮೂಲಕ ಸಾಹಸ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ತುಮಕೂರು : ಯುವಕನ್ನೊಬ್ಬ ಚಿರತೆಯ ಬಾಲ ಹಿಡಿದು ಬೋನಿಗೆ ಹಾಕುವ ಮೂಲಕ ಸಾಹಸ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ರಂಗಾಪುರ ಗ್ರಾಮದ ಸುತ್ತಮುತ್ತ ಹಲವಾರು ದಿವಸಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯರು ಈ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದರು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಸಲಕರಣೆಗಳೊಂದಿಗೆ ಬಂದರು. ಬಲೆ ಹಾಕಿ ಹಿಡಿಯಲು ಯತ್ನಿಸಿದಾಗ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿತ್ತು.

 ಕೂಡಲೇ ಅಲ್ಲೇ ಇದ್ದ ಆನಂದ್ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿ ಸಾಹಸ ಮೆರೆದಿದ್ದಾನೆ. ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಭೇಷ್ ಎಂದಿದ್ದಾರೆ.

PREV

Recommended Stories

ವಿವಿಧ ವಸತಿ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿದ ಎಸಿ
ಭಕ್ತರಿಂದ ಪೂಜಿಸಲ್ಪಡುತ್ತಿರುವ ಪಂಚವೃಕ್ಷಗಳ ಸ್ಥಳಾಂತರಕ್ಕೆ ಸಜ್ಜು