ಕನ್ನಡಪ್ರಭ ವಾರ್ತೆ ಉಡುಪಿ
ಈ ಸಂದರ್ಭ ಭಕ್ತರು ಚಿನ್ನದ ರಥ ನಿರ್ಮಾಣದಲ್ಲಿ ಭಾಗಿಯಾಗಿವುದಕ್ಕೆ ಚಿನ್ನ ಸಮರ್ಪಣೆಗೆ ಅವಕಾಶ ನೀಡಲಾಯಿತು. ಅದರಂತೆ ಅನೇಕ ಮಂದಿ ಭಕ್ತರು, ಹೊಸ ಚಿನ್ನದ ಜೊತೆಗೆ ತಮ್ಮ ಹಳೆಯ ಚಿನ್ನವನ್ನೂ ಕೃಷ್ಣನಿಗೆ ಸಮರ್ಪಿಸಿದರು.
ಈ ಸಂದರ್ಭ ಮಾತನಾಡಿದ ಪುತ್ತಿಗೆ ಶ್ರೀಗಳು, ಈ ಅಕ್ಷಯ ತೃತೀಯ ದಿನದಂದು ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಈ ದಿನದಂದು ಸೀತೆಗೆ ಅಗ್ನಿ ಪರೀಕ್ಷೆಯಾಗಿ, ಆಕೆ ಚಿನ್ನದಂತೆ ಪುಟವಾಗಿ ಹೊರಬಂದು ಮತ್ತೆ ಶ್ರೀರಾಮನ ಕೈ ಹಿಡಿದಳು. ಭೂಮಿಯಲ್ಲಿ ಹುಟ್ಟಿದ ಸೀತೆ ಸುವರ್ಣರೂಪಿಯೂ, ಲಕ್ಷ್ಮೀರೂಪಿಯೂ ಆಗಿದ್ದಾಳೆ. ಆದ್ದರಿಂದ ಈ ದಿನ ಭಗವಂತನಿಗೆ ಸುವರ್ಣ ಅರ್ಪಿಸಿದರೆ ಅಕ್ಷಯ ಫಲ ಸಿಗುತ್ತದೆ. ಆದ್ದರಿಂದ ಈ ದಿನ ಭಕ್ತರಿಗೆ ಚಿನ್ನ ಸಮರ್ಪಣೆಗೆ ಅವಕಾಶ ನೀಡಲಾಗಿದೆ ಎಂದರು.ಈ ಸಂದರ್ಭ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಬಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಪುತ್ತಿಗೆ ಶ್ರೀಗಳ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು, ವಿದ್ವಾಂಸ ಗೋಪಾಲಾಚಾರ್ಯರು ಮುಂತಾದವರು ಉಪಸ್ಥಿತರಿದ್ದರು.