- ಹುತಾತ್ಮರ ದಿನ ಅಂಗವಾಗಿ ಮಹೇಶ್ ಮಾನವೀಯತೆಗೆ ಹನುಮಂತಪ್ಪ ಮೆಚ್ಚುಗೆ
- ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ 48ನೇ ಹುಟ್ಟುಹಬ್ಬ
- ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಗಿಡಗಳ ಬೆಳೆಸುವ ಅಪರೂಪದ ವ್ಯಕ್ತಿ- 50ಕ್ಕೂ ಹೆಚ್ಚು ದೊಡ್ಡ ಗಾತ್ರದ ಛತ್ರಿಗಳ ಉಚಿತವಾಗಿ ವಿತರಣೆ
ದಿನನಿತ್ಯದ ಬದುಕಿನಲ್ಲಿ ತರಕಾರಿ ಮಾರಾಟ ಮಾಡಿ, ಜೀವನ ಸಾಗಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ ಉಚಿತವಾಗಿ ಛತ್ರಿಗಳನ್ನು ನೀಡಿ, ಮಾನವೀಯತೆ ಮೆರೆದಿದ್ದಾರೆ. ಅವರ ಜನಸೇವೆ ವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಬಿಜೆಪಿ ಮುಖಂಡ ಅರಕೆರೆ ಎ.ಬಿ.ಹನುಮಂತಪ್ಪ ಹೇಳಿದರು.
ಕೆಲವರು ದುಂದುವೆಚ್ಚ ಮಾಡಿ ಅದ್ಧೂರಿ ಹುಟ್ಟುಹಬ್ಬ ಆಚರಿಸುತ್ತಾರೆ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ಮಹೇಶ್ ಅವರು ತಮ್ಮ 48ನೇ ಹುಟ್ಟುಹಬ್ಬದ ನಿಮಿತ್ತ ಬೀದಿಬದಿ ವ್ಯಾಪಾರಸ್ಥರಿಗೆ 50ಕ್ಕೂ ಹೆಚ್ಚು ದೊಡ್ಡ ಗಾತ್ರದ ಛತ್ರಿಗಳನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ, ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎನ್.ಸಿ.ಕಲ್ಯಾಣಿ ಅವರಿಗೆ ಸನ್ಮಾನಿಸಿದ್ದಾರೆ. ಬೀದಿಗಳಲ್ಲಿ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಗಿಡಗಳನ್ನು ಬೆಳೆಸುವ ಅಪರೂಪದ ವ್ಯಕ್ತಿ ಮಹೇಶ್ ಎಂದು ಶ್ಲಾಘಿಸಿದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಎಂ.ಟಿ.ಬಿ. ಮಂಜು, ಕಲ್ಕೇರಿ ದೇವು, ದಿಕ್ಷೀತ, ಕತ್ತಿಗೆ ನಾಗರಾಜ್, ಸಿ.ಕೆ.ರವಿ ಸೇರಿದಂತೆ ಅನೇಕ ಮುಖಂಡರು, ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಉಚಿತ ಛತ್ರಿಗಳು ವಿತರಿಸಿ, ಅಂತರ ರಾಷ್ಟ್ರೀಯ ಕ್ರೀಡಾಪಟು ಎನ್.ಜಿ. ಕಲ್ಯಾಣಿ ಅವರನ್ನು ಗೌರವಿಸಲಾಯಿತು.