ಚಾಮರಾಜನಗರದಲ್ಲಿ ದಿನೇ ದಿನೇ ಚಿರತೆ ದಾಳಿಗಳ ವರದಿ ಹೆಚ್ಚುತ್ತಿದ್ದು, ಶುಕ್ರವಾರವೂ ಸಹ ಇದೇ ಮುಂದುವರೆದಿದೆ. ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 2 ಮೇಕೆಗಳು ಬಲಿಯಾಗಿವೆ. ಮತ್ತೊಂದರ ಸ್ಥಿತಿ ಚಿಂತಾಜನಲವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಚಾಮರಾಜನಗರದಲ್ಲಿ ದಿನೇ ದಿನೇ ಚಿರತೆ ದಾಳಿಗಳ ವರದಿ ಹೆಚ್ಚುತ್ತಿದ್ದು, ಶುಕ್ರವಾರವೂ ಸಹ ಇದೇ ಮುಂದುವರೆದಿದೆ. ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 2 ಮೇಕೆಗಳು ಬಲಿಯಾಗಿವೆ. ಮತ್ತೊಂದರ ಸ್ಥಿತಿ ಚಿಂತಾಜನಲವಾಗಿದೆ.
ಮಹಾಲಿಂಗನಕಟ್ಟೆ ಗ್ರಾಮದ ಸಿದ್ದೆಗೌಡರ ಜಮೀನಿನಲ್ಲಿ ಚಿರತೆ ದಾಳಿ ನಡೆದಿದ್ದು ರೈತರು ಬೆಚ್ಚಿಬಿದ್ದಿದ್ದಾರೆ. ಸಿದ್ದೇಗೌಡರು 8 ಮೇಕೆಗಳನ್ನು ಸಾಕಿದ್ದರು. ಅದರಲ್ಲಿ ಮೂರು ಬಲಿಯಾಗಿ ಒಂದರ ಸ್ಥಿತಿ ಗಂಭೀರವಾಗಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ‘ಚಿರತೆಯಿಂದ ಮೇಕೆ ಕಳೆದುಕೊಂಡ ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು. ಜೊತೆಗೆ ಚಿರತೆ ರೈತರ ಜಮೀನಿಗೆ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಚಿರತೆ ಸೆರೆಗೆ ಸೈರನ್ ಬೋನ್...
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ತಿಂಗಳು ಮಂಡ್ಯ ಜಿಲ್ಲೆಯ ವ್ಯಕ್ತಿಯನ್ನು ಚಿರತೆ ಬಲಿ ಘಟನೆ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆಯು ಚಿರತೆ ಸೆರೆಗೆ ಸೈರನ್ ಬೋನ್ ಇರಿಸಿದೆ. ಬೆಟ್ಟಕ್ಕೆ ಹೋಗುವಾಗ ಸಿಗುವ 7ನೇ ತಿರುವು ಮತ್ತು ರಂಗಸ್ವಾಮಿ ಒಡ್ಡಿನ ಎರಡು ಕಡೆಗಳಲ್ಲಿ ಬೋನ್ ಇಡಲಾಗಿದೆ. ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ, ಪೊಲೀಸ್ ಮತ್ತು ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ನಿಯೋಜಿಸಲಾಗಿದೆ.
ಚಿರತೆ ಸೆರೆಗೆ ಡ್ರೋನ್ ಬಳಕೆ:
ಮತ್ತೊಂದೆಡೆ ಚಿರತೆ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಡ್ರೋನ್ಗಳ ಮೊರೆ ಹೋಗಿದೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಡ್ರೋನ್ ಸಹ ಬಳಸುತ್ತಿದ್ದಾರೆ.
ಭದ್ರತೆ ಶಾಸಕ ಮಂಜುನಾಥ್ ಸೂಚನೆ:
ಮತ್ತೊಂದೆಡೆ ಶಾಸಕ ಎ.ಆರ್.ಮಂಜುನಾಥ್ ಅವರು ಚಿರತೆಗಳ ಸೆರೆಹಿಡಿಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಓರ್ವ ಭಕ್ತ ಮೃತಪಟ್ಟಿದ್ದು, ಮತ್ತೋರ್ವ ಬಾಲಕ ಗಾಯಗೊಂಡಿದ್ದಾನೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸಬಾರದೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.