ಕೊಪ್ಪಳ:
ಗೊಬ್ಬರ ಸಿಗದೆ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದ ತಾಲೂಕಿನ ಕುಣಿಕೇರಿ ಗ್ರಾಮದ ರೈತ ಚಂದ್ರಪ್ಪ ಬಡಗಿ ಮನೆಗೆ ಪಕ್ಷದ ನಿಯೋಗದೊಂದಿಗೆ ಸೋಮವಾರ ಭೇಟಿ ನೀಡಿ ಎರಡು ಚೀಲ ಯೂರಿಯಾ ಪೂರೈಕೆ ಮಾಡಿ ಮಾತನಾಡಿದ ಅವರು, 8,73,000 ಮೆಟ್ರಿಕ್ ಟನ್ ರಸಗೊಬ್ಬರ ಇದ್ದರೂ ಕೇವಲ 5,73,000 ಲಕ್ಷ ರಸಗೊಬ್ಬರ ಮಾತ್ರ ವಿತರಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಉಳಿದ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆಂದು ದೂರಿದರು.
ರೈತರು ಗೊಬ್ಬರ ಸಿಗದೆ ಸಂಕಷ್ಟ ಪಡುತ್ತಿದ್ದು ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದ ಅವರು, ಗೊಬ್ಬರ ಸಿಗದೆ ರೈತ ಮಣ್ಣು ತಿಂದಿರುವ ವರದಿ ಗಮಿನಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ಇಲ್ಲಿಗೆ ಬಂದು ಚಂದ್ರಪ್ಪನಿಗೆ ಗೊಬ್ಬರ ನೀಡಿದ್ದೇವೆ. ಈ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದೇವೆ. ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ರೈತರ ಧ್ವನಿಯಾಗಿ ನಮ್ಮ ನಾಯಕರು ಇರುತ್ತಾರೆ ಎಂದರು.ರಾಜ್ಯ ಸರ್ಕಾರದ ನಿರ್ಲಕ್ಷ್ಯ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆವರ್ತನಿಧಿ ಮೂಲಕ ಮಾರ್ಚ್, ಏಪ್ರಿಲ್ ತಿಂಗಳಲ್ಲಿಯೇ ಯೂರಿಯಾ ರಸಗೊಬ್ಬರ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೆ ಮಾಡದೆ ಇರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದ ದೂರಿದ ಅವರು, ರಾಜ್ಯಾದ್ಯಂತ ರೈತ ಮೋರ್ಚಾ ವತಿಯಿಂದ ಸುತ್ತಾಡಿ ರೈತರ ಪರವಾಗಿ ಧ್ವನಿ ಎತ್ತಲಾಗುವುದು ಎಂದರು.
ನಾನು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ನನಗೆ ಯೂರಿಯಾ ರಸಗೊಬ್ಬರ ನೀಡಿದ್ದಾರೆ. ಆದರೆ, ನನಗೊಬ್ಬನಿಗೆ ಸಿಕ್ಕರೆ ಸಾಲದು, ಎಲ್ಲ ರೈತರಿಗೂ ಸಿಗಬೇಕು ಎಂದು ರೈತ ಚಂದ್ರಪ್ಪ ಬಡಗಿ ಹೇಳಿದ್ದಾರೆ.
ನಾನು ಕಳೆದೊಂದು ತಿಂಗಳಿಂದ ಯೂರಿಯಾ ರಸಗೊಬ್ಬರಕ್ಕಾಗಿ ಸುತ್ತಾಡಿದ್ದೇನೆ. ಎಲ್ಲಿಯೂ ಸಿಗಲಿಲ್ಲ. ಕೊಪ್ಪಳ ಮಾತ್ರವಲ್ಲದೆ ಪಕ್ಕದೂರಿಗೂ ಹೋಗಿ ಬಂದಿದ್ದೇನೆ. ಎಲ್ಲಿಯೂ ಸಿಗಲಿಲ್ಲ. ನಾನು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸರ್ಕಾರ ಮನೆಗೆ ತಂದುಕೊಟ್ಟಿದೆ ಎಂದು ಹೇಳಿದರು.