ಗ್ರಾಪಂನಲ್ಲಿ ಅಧ್ಯಕ್ಷೆ ವಿವಾಹ ವಾರ್ಷಿಕೋತ್ಸವ ಆಚರಣೆ!

KannadaprabhaNewsNetwork |  
Published : May 20, 2026, 01:00 AM IST
ಫೋಟೋ 19KRT-1ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಜೊತೆಗೆ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಿಸಿದ ವೇಳೆ ಕೇಕ್ ತಿನಿಸುತ್ತಿರುವುದು. | Kannada Prabha

ಸಾರಾಂಶ

ಪಂಚಾಯತಿ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡ ಫೋಟೋ ಸದಸ್ಯರ, ಸಿಬ್ಬಂದಿ, ಪಿಡಿಓಗಳ ವ್ಯಾಟ್ಸಾಪ್ ಗುಂಪುಗಳಲ್ಲಿ ವೈರಲ್‌ ಆದ ಕಾರಣಕ್ಕೆ ಇಷ್ಟೆಲ್ಲ ರಾದ್ಧಾಂತ

ಕಾರಟಗಿ: ಗ್ರಾಪಂ ಅಧ್ಯಕ್ಷೆಯೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಗ್ರಾಪಂ ಕಚೇರಿಯಲ್ಲಿ ಆಚರಿಸಿಕೊಂಡ ಹಿನ್ನೆಲೆ ತಾಪಂ ಇಓ ಕಾರಣ ಕೇಳಿ ನೋಟಿಸ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾಲೂಕಿನ ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಕಳೆದ ಮೇ 15 ರಂದು ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ವಿವಾಹ ವಾರ್ಷಿಕೋತ್ಸವವನ್ನು ಕೆಲ ಸದಸ್ಯರು ಹಾಗೂ ಸಿಬ್ಬಂದಿ ಜತೆಗೆ ಆಚರಿಸಿಕೊಂಡಿದ್ದರಿಂದ ತಾಪಂ ಇಒ ಲಕ್ಷ್ಮೀದೇವಿ ಗ್ರಾಪಂ ಕಚೇರಿಗೆ ಮೇ 18ರಂದು ನೋಟೀಸ್ ನೀಡಿದ್ದಾರೆ.

ಪಂಚಾಯತಿ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡ ಫೋಟೋ ಸದಸ್ಯರ, ಸಿಬ್ಬಂದಿ, ಪಿಡಿಓಗಳ ವ್ಯಾಟ್ಸಾಪ್ ಗುಂಪುಗಳಲ್ಲಿ ವೈರಲ್‌ ಆದ ಕಾರಣಕ್ಕೆ ಇಷ್ಟೆಲ್ಲ ರಾದ್ಧಾಂತವಾಗಿದೆ.

ನಿಯಮಗಳ ಪ್ರಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಗ್ರಾಪಂ ಕಚೇರಿಯು ಸಾರ್ವಜನಿಕ ಸಂಸ್ಥೆ. ಈ​ ಕಟ್ಟಡ ಇಲ್ಲಿನ ಪೀಠೋಪಕರಣ ಹಾಗೂ ಸೌಲಭ್ಯ ಕೇವಲ ಸಾರ್ವಜನಿಕ ಆಡಳಿತ, ಪಂಚಾಯತಿ ಸಭೆ ಮತ್ತು ಅಭಿವೃದ್ಧಿ ಕೆಲಸ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು. ಹೀಗಾಗಿ ಯಾರೆ ಎಷ್ಟೇ ಪ್ರಭಾವಿಯಾಗಿದ್ದರೂ ಸ್ವಂತ ಅಥವಾ ವೈಯಕ್ತಿಕ ಬಳಕೆಗೆ ಅವಕಾಶವಿಲ್ಲ. ಹೀಗಿದ್ದ ಮೇಲೆ ಪಂಚಾಯತಿ ಅಧ್ಯಕ್ಷೆ ತಮ್ಮ ವೈಯಕ್ತಿಕ ವಿವಾಹ ವಾರ್ಷಿಕೋತ್ಸವ ಕೆಲ ಸದಸ್ಯರು ಮತ್ತು ಗ್ರಾಪಂ ಸಿಬ್ಬಂದಿ ಜತೆ ಸೇರಿ ಆಚರಣೆ ಮಾಡಿದರೆ ಅಧಿಕಾರ ದುರ್ಬಳಕೆಯಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಈ ನಡುವೆ ಆಚರಣೆಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೇಲಾಧಿಕಾರಿಗಳ ಗಮನಕ್ಕೆ ಹೋಗಿ ಪ್ರಕರಣ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಾಪಂ ಇಒ ಲಕ್ಷ್ಮೀ ದೇವಿ ಗ್ರಾಪಂ ಕಚೇರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಗ್ರಾಪಂ ಪಿಡಿಒಗೆ ಸೂಚನೆ ನೀಡಿದ್ದಾರೆ. ನೋಟಿಸ್ ನೀಡಿದ ಪ್ರಕರಣ ಸಿದ್ದಾಪುರ ಗ್ರಾಮವಲ್ಲದೆ ಗ್ರಾಪಂ ಮಟ್ಟದಲ್ಲಿ ಪ್ರಕರಣ ಸಂಚಲನ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೃತ ೨.೦ ಕುಡಿಯುವ ನೀರಿನ ಕಾಮಗಾರಿ ಅಧ್ವಾನ
ಸ್ಥಳೀಯ ಕಾಂಗ್ರೆಸ್‌ ಮುಖಂಡರ ಕಡೆಗಣನೆ: ಶ್ರೀನಾಥ ಆಕ್ರೋಶ