ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲ್ ಗುಡ್ಡ ಸರ್ಕಾರಿ ಗೋಮಾಳದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಭೂಮಿಪೂಜೆ ನೆರವೇರಿಸುವ ಕಾರ್ಯಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.
ಇದಕ್ಕೂ ಮುನ್ನವೇ ಜಮಾಯಿಸಿದ್ದ ಬೆಜ್ಜರಹಳ್ಳಿಕಟ್ಟೆ, ಪಾದರಹಳ್ಳಿ, ಹನುಮಂತೇಗೌಡನದೊಡ್ಡಿ, ಹರೀಸಂದ್ರ, ಕಾಳೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಭೂರಗಮರದೊಡ್ಡಿ, ತಿಮ್ಮೇಗೌಡನದೊಡ್ಡಿ, ಮಾರೇಗೌಡನದೊಡ್ಡಿ ಗ್ರಾಮಸ್ಥರು ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸುತ್ತುವರೆದು ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪೊಲೀಸರೊಂದಿಗೆ ಮಾತಿನ ಚಕಮಕಿ :ಇಕ್ಬಾಲ್ ಹುಸೇನ್ ಮತ್ತು ಕೆ.ಶೇಷಾದ್ರಿಯವರು ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಒಪ್ಪಲಿಲ್ಲ. ವಿರೋಧ ಲೆಕ್ಕಿಸದೆ ಭೂಮಿಪೂಜೆ ನೆರವೇರಿಸಲು ಮುಂದಾದ ಶಾಸಕರ ಎದುರು ಕೆಲ ಗ್ರಾಮಸ್ಥರು ಶಾಸಕರಿಗೆ ಅಡ್ಡಲಾಗಿ ಮಲಗಿದರು. ಅಲ್ಲದೆ, ಮಾತಿನ ಚಕಮಕಿ ನಡೆಸಿದ್ದರಿಂದ ನೂಕಾಟ ತಳ್ಳಾಟವೂ ನಡೆಯಿತು.
ನೈಸರ್ಗಿಕ ಪ್ರದೇಶ ಮಲೀನ:
ಈಗ ಬೈರಮಂಗಲ ಕೆರೆ ಕಲುಷಿತಗೊಂಡಿದ್ದು, ಇದರಿಂದ ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆ ಊರಿನವರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಬೇಕಾದರೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ರಾಮನಗರದ ಕಸವನ್ನು ಸಾಗಿಸಿ, ಈ ಹಿಂದೆ ಅನಿತಾ ಶಾಸಕರಾಗಿದ್ದಾಗ ಘಟಕ ನಿರ್ಮಾಣಕ್ಕೆ ನಿಮ್ಮದೇ ಪಕ್ಷದವರು ವಿರೋಧ ಮಾಡಿ ಕಳುಹಿಸಿದ್ದರು. ಈಗ ನಿಲುವು ಬದಲಾವಣೆ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.
ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಬಲ ಪ್ರಯೋಗದಿಂದ ಘಟಕ ನಿರ್ಮಿಸುವ ದುರುದ್ದೇಶ ಹೊಂದಿಲ್ಲ. ಘಟಕದ ವಿಚಾರವಾಗಿ ಗ್ರಾಮಸ್ಥರಲ್ಲಿ ತಪ್ಪು ತಿಳುವಳಿಕೆ ಇದ್ದು, ಪೂರ್ವಗ್ರಹ ಪೀಡಿತರಾಗಿದ್ದಾರೆ. ಜಾನಪದ ಲೋಕದ ಬಳಿ ಯುಜಿಡಿ ಟ್ರೀಟ್ ಮೆಂಟ್ ಪ್ಲಾಂಟ್ ಇದ್ದು, ಅದಕ್ಕೂ ವಿರೋಧ ವ್ಯಕ್ತವಾಗಿತ್ತು. ಈಗ ಜನರು ಮೌನವಾಗಿದ್ದಾರೆ. ಅದೇ ರೀತಿ ನಿಮ್ಮೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಘಟಕ ನಿರ್ಮಾಣ ಮಾಡುತ್ತೇವೆ ಎಂದರು.
ಶಾಸಕ ಇಕ್ಬಾಲ್ ಹುಸೇನ್, ಬೆಂಗಳೂರಿನ ಇಂದಿರಾನಗರ, ಕೆ.ಆರ್.ಪುರಂ ಹಾಗೂ ಬನಶಂಕರಿ ನಗರಗಳಲ್ಲಿ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಲಾಗುತ್ತಿದ್ದು, ಅದೇ ಮಾದರಿಯ ಘಟಕವನ್ನು ಇಲ್ಲಿ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ಗ್ರಾಮಸ್ಥರು ಮಾ.8ರಂದು ಆ ಘಟಕಗಳನ್ನು ವೀಕ್ಷಣೆ ಮಾಡಿಕೊಂಡು ಬಂದು ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹರೀಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಶಿವಕುಮಾರ್, ಗ್ರಾಮದ ಮುಖಂಡರಾದ ಅಪ್ಪಯ್ಯ, ರೇಣುಕಾ, ಶಿವಪ್ಪ, ಅಶ್ವತ್ಥ, ಸಂತೋಷ ಮತ್ತಿತರರು ಹಾಜರಿದ್ದರು.
ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಕಗ್ಗಲ್ ಗುಡ್ಡದಲ್ಲಿ ಸ್ವಚ್ಛ ಭಾರತ್ ಅಭಿಯಾನ 2.0 ಯೋಜನೆ ಅಡಿಯಲ್ಲಿ 2.60 ಕೋಟಿ ರುಪಾಯಿ ವೆಚ್ಚದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಗ್ರಾಮಸ್ಥರಲ್ಲಿ ತಪ್ಪು ತಿಳುವಳಿಕೆ ಇರುವುದರಿಂದ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ ಮುಖಂಡರನ್ನು ಬೆಂಗಳೂರಿನಲ್ಲಿರುವ ಕಸ ನಿರ್ವಹಣೆ ಘಟಕ ತೋರಿಸಿದ ತರುವಾಯ ಅವರನ್ನು ವಿಶ್ವಾಸಕ್ಕೆ ಪಡೆದು ಘಟಕ ನಿರ್ಮಾಣ ಮಾಡುತ್ತೇವೆ.
- ಇಕ್ಬಾಲ್ ಹುಸೇನ್, ಶಾಸಕರುಬಾಕ್ಸ್ ................
ಮಾ.8ರಂದು ಬೆಂಗಳೂರಿಗೆ ಅಧ್ಯಯನ ಪ್ರವಾಸಹರೀಸಂದ್ರ ಗ್ರಾಪಂ ವ್ಯಾಪ್ತಿಯ ಕಗ್ಗಲ್ ಗುಡ್ಡದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಘಟಕ ಹೇಗೆ ನಿರ್ಮಾಣಗೊಂಡು, ಕಾರ್ಯನಿರ್ವಹಿಸಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಗ್ರಾಮಸ್ಥರು ಮಾ.8ರಂದು ಬೆಂಗಳೂರಿಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಈ ಪ್ರವಾಸದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾಧಿಕಾರಿಗಳು, ಡಿವೈಎಸ್ಪಿ ಹಾಗೂ ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮುಖಂಡರು ಭಾಗವಹಿಸಲಿದ್ದಾರೆ.
5ಕೆಆರ್ ಎಂಎನ್ 1,2.ಜೆಪಿಜಿ1.ಶಾಸಕ ಇಕ್ಬಾಲ್ ಹುಸೇನ್ ಎದುರು ಅಡ್ಡಲಾಗಿ ಮಲಗಿ ಗ್ರಾಮಸ್ತರು ವಿರೋಧ ವ್ಯಕ್ತಪಡಿಸುತ್ತಿರುವುದು.
2.ಕಗ್ಗಲ್ ಗುಡ್ಡದಲ್ಲಿ ಗ್ರಾಮಸ್ಥರು ಒಣ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು.