ಖಾದರ್‌ ಸಹೋದರಿ ಪುತ್ರಿ ವಿವಾಹಕ್ಕೆ ಪ್ರಮುಖರ ದಂಡು: ಸಂಚಾರ ದಟ್ಟಣೆ

KannadaprabhaNewsNetwork |  
Published : May 26, 2024, 01:35 AM IST
ಖಾದರ್‌ | Kannada Prabha

ಸಾರಾಂಶ

ಭದ್ರತೆ ವಿಚಾರ ಮತ್ತು ಸಂಚಾರ ಸುಸ್ಥಿತಿಗಾಗಿ ನಗರದ ನವಭಾರತ್‌ ಸರ್ಕಲ್‌ನಿಂದ ಪಿವಿಎಸ್‌ ಮುಖಾಂತರ ಲೇಡಿಹಿಲ್‌ವರೆಗೆ ಸಂಜೆ ಬಳಿಕ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಹೀಗಾಗಿ ವಿವಿಧೆಡೆಗಳಲ್ಲಿ ಟ್ರಾಫಿಕ್‌ ಜ್ಯಾಂನಿಂದ ವಾಹನ ಚಾಲಕರು ಪರದಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಅವರ ಸಹೋದರಿ ಪುತ್ರಿ ವಿವಾಹ ಸಮಾರಂಭ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ರಾಜ್ಯಪಾಲರಾದಿಯಾಗಿ ವಿವಿಧ ಪಕ್ಷಗಳ ನಾಯಕರ ದಂಡೇ ಆಗಮಿಸಿತ್ತು. ಈ ಕಾರಣದಿಂದ ಮಂಗಳೂರು ನಗರದ ಮಹಾತ್ಮಾ ಗಾಂಧಿ ರಸ್ತೆಯನ್ನೇ ವಾಹನ ಸಂಚಾರಕ್ಕೆ ಬಂದ್‌ ಮಾಡಲಾಗಿತ್ತು.

ರಾಜ್ಯ ಸರ್ಕಾರದ ಬಹುತೇಕ ಸಚಿವರು, ವಿಪಕ್ಷ ನಾಯಕ ಆರ್‌. ಅಶೋಕ್‌ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಮುಖಂಡರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಭದ್ರತೆ ವಿಚಾರ ಮತ್ತು ಸಂಚಾರ ಸುಸ್ಥಿತಿಗಾಗಿ ನಗರದ ನವಭಾರತ್‌ ಸರ್ಕಲ್‌ನಿಂದ ಪಿವಿಎಸ್‌ ಮುಖಾಂತರ ಲೇಡಿಹಿಲ್‌ವರೆಗೆ ಸಂಜೆ ಬಳಿಕ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಹೀಗಾಗಿ ವಿವಿಧೆಡೆಗಳಲ್ಲಿ ಟ್ರಾಫಿಕ್‌ ಜ್ಯಾಂನಿಂದ ವಾಹನ ಚಾಲಕರು ಪರದಾಡಿದರು. ಕೊಟ್ಟಾರಚೌಕಿ, ಕುಂಟಿಕಾನ, ನಂತೂರು, ಜ್ಯೋತಿ ಸರ್ಕಲ್‌, ಬಲ್ಮಠ, ಹಂಪನಕಟ್ಟೆ, ಕಾರ್‌ಸ್ಟ್ರೀಟ್‌ನಲ್ಲಿ 7 ಗಂಟೆ ವೇಳೆಗೆ ತೀವ್ರ ವಾಹನ ದಟ್ಟಣೆ ಕಂಡುಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ