ಕರ್ನಾಟಕ ಬಳಿಕ ಇದೀಗ ತೆಲಂಗಾಣ ಕಾಂಗ್ರೆಸ್‌ನ ಎಟಿಎಂ: ಪ್ರಧಾನಿ ಮೋದಿ

| Published : Mar 06 2024, 02:23 AM IST / Updated: Mar 06 2024, 03:52 PM IST

MODI SNADESJ
ಕರ್ನಾಟಕ ಬಳಿಕ ಇದೀಗ ತೆಲಂಗಾಣ ಕಾಂಗ್ರೆಸ್‌ನ ಎಟಿಎಂ: ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದ ಬಳಿಕ ಹೊಸದಾಗಿ ಸರ್ಕಾರ ರಚಿಸಿರುವ ತೆಲಂಗಾಣ ಎಟಿಎಂ ಆಗಿ ಪರಿವರ್ತನೆಯಾಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಹೈದರಾಬಾದ್‌: ಕರ್ನಾಟಕವನ್ನು ಕಾಂಗ್ರೆಸ್‌ ಪಕ್ಷ ತನ್ನ ಎಟಿಎಂ ಮಾಡಿಕೊಂಡಿದೆ ಎಂದು ಹಲವು ಬಾರಿ ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಕಾಂಗ್ರೆಸ್‌ ಪಾಲಿಗೆ ತೆಲಂಗಾಣ ಮತ್ತೊಂದು ಎಟಿಎಂ ಆಗಿದೆ ಎಂದು ಆರೋಪಿಸಿದ್ದಾರೆ.

ತೆಲಂಗಾಣದಲ್ಲಿ ಮಂಗಳವಾರ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಇದ್ದ ಕೆ ಸಿ ಚಂದ್ರ ಶೇಖರ ರಾವ್‌ ಅವರ ಬಿಆರ್‌ಎಸ್‌ ಪಕ್ಷ ತೆಲಂಗಾಣವನ್ನು ಲೂಟಿ ಮಾಡಿತು. ಈಗ ಕಾಂಗ್ರೆಸ್‌ ಯಾವುದೇ ದಾಖಲೆಗಳನ್ನು ಬಹಿರಂಗಪಡಿಸದೆ ತೆಲಂಗಾಣವನ್ನು ಎಟಿಎಂ ಮಾಡಿಕೊಂಡಿದೆ. ಈ ಎರಡೂ ಪಕ್ಷಗಳು ಹಗರಣಗಳ ಜಾಲದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.