ಸಾರಾಂಶ
ರಾಣಿಬೆನ್ನೂರು: ನಗರವು ಜಿಲ್ಲೆಯಲ್ಲಿಯೇ ಅತಿ ದೊಡ್ಡದಾಗಿದ್ದು, ಸ್ಥಳೀಯ ಜನರಿಗೆ ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ವ್ಯವಸ್ಥಿತ ರೀತಿಯಲ್ಲಿ ಲೇಔಟ್ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಭರವಸೆ ನೀಡಿದರು.ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ವೀರೇಶ ಮೋಟಗಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನಗರದ ದೊಡ್ಡಕೆರೆಯನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಅದನ್ನು ಪ್ರವಾಸಿ ತಾಣವಾಗಿಸುವ ಚಿಂತನೆಯಿದೆ. 1971ರಲ್ಲಿ ಪಾಕಿಸ್ತಾನದ ಜತೆ ನಡೆದ ಯುದ್ಧದಲ್ಲಿ ಕಾರ್ಯನಿರ್ವಹಿಸಿದ(ಸದ್ಯ ಪುಣೆಯಲ್ಲಿರುವ) ಸೇನಾ ಟ್ಯಾಂಕರ್ನ್ನು ನಗರದ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುವುದು. ನಗರದಲ್ಲಿರುವ 400 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಿ ಅವುಗಳ ನಿರ್ವಹಣೆಯನ್ನು ಸಾರ್ವಜನಿಕರ ಸುಪರ್ದಿಗೆ ವಹಿಸಲು ಯೋಚಿಸಲಾಗುತ್ತಿದೆ ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವೀರೇಶ ಮೋಟಗಿ ಮಾತನಾಡಿ, ಶಾಸಕರ ಸಹಕಾರದೊಂದಿಗೆ ಸುಂದರ ನಗರೀಕರಣಕ್ಕೆ ಒತ್ತು ನೀಡಲಾಗುವುದು. ಅನಧಿಕೃತ ಲೇಔಟ್ಗಳಿಗೆ ಕಡಿವಾಣ ಹಾಕಲಾಗುವುದು ಎಂದರು. ನಗರ ಯೋಜನಾ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗುರುನಾಥ ಕಂಬಳಿ, ಬಸವರಾಜ ಕಡೇಮನಿ, ನೂರಜಹಾನ ನಂದ್ಯಾಲ, ಸದಸ್ಯ ಕಾರ್ಯದರ್ಶಿ ರವಿಕಿರಣ, ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಗಂಗಾಧರ ಬಣಕಾರ, ಪ್ರೊ. ಬಿ.ಬಿ. ನಂದ್ಯಾಲ, ಪ್ರಭುಗೌಡ ಪಾಟೀಲ, ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಜಿ.ಜಿ. ಹೊಟ್ಟಿಗೌಡ್ರ, ವಿ.ಎಫ್. ಮರಬಸಣ್ಣನವರ, ಚಂದ್ರಕಲಾ ಬಿಷ್ಟಣ್ಣನವರ, ಇರ್ಫಾನ ದಿಡಗೂರ ಮತ್ತಿತರರಿದ್ದರು.ಶೌಚಾಲಯ ನಿರ್ಮಾಣಕ್ಕೆ ಆಗ್ರಹರಾಣಿಬೆನ್ನೂರು: ತಾಲೂಕು ಪಂಚಾಯಿತಿ ಆವರಣದಲ್ಲಿ ಹೊಸದಾಗಿ ಸಾರ್ವಜನಿಕರ ಶೌಚಾಲಯ ನಿರ್ಮಿಸುವಂತೆ ಅಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ತಾಪಂ ಇಒ ಪರಮೇಶ ಅವರಿಗೆ ಮನವಿ ಸಲ್ಲಿಸಿದರು.ಸಂಘಟನೆಯ ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಂಜೀವ ಕನವಳ್ಳಿ ಮಾತನಾಡಿ, ನಗರದಲ್ಲಿನ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 40 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿದಿನ ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು ಕಚೇರಿ ಕೆಲಸಕ್ಕಾಗಿ ಬಂದು ಹೋಗುತ್ತಾರೆ. ಸದ್ಯ ತಾಲೂಕು ಪಂಚಾಯಿತಿ ಅವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಶಿಥಿಲಗೊಂಡಿದೆ. ಮಹಿಳೆಯರ ಶೌಚಾಲಯವಿದ್ದರೂ ಅದಕ್ಕೆ ಯಾವಾಗಲೂ ಬೀಗ ಹಾಕಲಾಗಿರುತ್ತದೆ. ಆದ್ದರಿಂದ ಕೂಡಲೇ ಹೊಸದಾಗಿ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ, ರಾಜ್ಯ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಸಿದ್ಧಾರೂಢ ಗುರುಂ, ಪರಶುರಾಮ ಕುರುವತ್ತಿ, ರಿಯಾಜ್ ದೊಡ್ಡಮನಿ, ಮೃತುಂಜಯ ಕರಿಯಜ್ಜಿ, ಮಂಜುನಾಥ ಶಂಭೋಜಿ, ತಿಪ್ಪೇಶ ಮಾದಾಪುರ, ಅಣ್ಣಪ್ಪ ಜೆ.ಸಿ., ಮಾಲತೇಶ ಮ್ಯಾಗೇರ, ಮರಡೆಪ್ಪ ಚಳಗೇರಿ, ನಾಗರಾಜ ಪೂಜಾರ, ಶೋಭಾ ಮುದೇನೂರು, ಪರಶುರಾಮ ಕೋಲಕಾರ, ಹನುಮಗೌಡ ಪಾಟೀಲ ಮತ್ತಿತರರಿದ್ದರು.