ಸಂಸ್ಕಾರ ತಂದೆ, ಗುರುಗಳಿಂದ ಪಾರಂಪರಿಕವಾಗಿ ದೊರೆಯುವ ವಿದ್ಯೆ: ಡಾ.ಶಶಾಂಕ ಹತ್ವಾರ್

| Published : Aug 20 2024, 12:54 AM IST

ಸಂಸ್ಕಾರ ತಂದೆ, ಗುರುಗಳಿಂದ ಪಾರಂಪರಿಕವಾಗಿ ದೊರೆಯುವ ವಿದ್ಯೆ: ಡಾ.ಶಶಾಂಕ ಹತ್ವಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮ ನಡೆಯಿತು. ವೇದಾಂತ ಹಾಗೂ ಯೋಗ ಪ್ರವೀಣ ಡಾ.ಶಶಾಂಕ ಹತ್ವಾರ್ ‘ಮಂಡೂಕ ಉಪನಿಷತ್ತು’ ಕುರಿತು ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಂಸ್ಕಾರವು ತಂದೆ, ಗುರುಗಳಿಂದ ಶಿಷ್ಯರಿಗೆ, ಮಕ್ಕಳಿಗೆ ಪಾರಂಪರಿಕವಾಗಿ ದೊರೆಯುವ ವಿದ್ಯೆಯಾಗಿದೆ ಎಂದು ವೇದಾಂತ ಹಾಗೂ ಯೋಗ ಪ್ರವೀಣ ಡಾ.ಶಶಾಂಕ ಹತ್ವಾರ್ ತಿಳಿಸಿದರು.

ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಮಂಡೂಕ ಉಪನಿಷತ್ತು’ ಕುರಿತು ಉಪನ್ಯಾಸ ನೀಡಿದರು.ಪ್ರತಿಯೊಬ್ಬರಲ್ಲಿಯೂ ಭಗವಂತನ ವಿಶೇಷ ಚೇತನವಿದ್ದು, ಸಾಧನೆಯಿಂದ ಆ ಚೈತನ್ಯ ಸ್ವರೂಪದ ಅರಿವಾಗುತ್ತದೆ. ಲೌಕಿಕದಲ್ಲಿದ್ದುಕೊಂಡೆ ಈ ಬ್ರಹ್ಮಜ್ಞಾನವನ್ನು ಹೊಂದಬಹುದಾಗಿದೆ. ವೇದಾಂತವು ಸ್ವಂತ ಅಧ್ಯಯನದಿಂದ ಕಲಿಯುವ ವಿದ್ಯೆಯಾಗಿರದೆ ಇದು ಒಬ್ಬರಿಗೆ ಅಥವಾ ಒಂದು ಪಂಗಡಕ್ಕೆ ಸೀಮಿತವೂ ಆಗಿರದೆ ಯೋಗ್ಯತೆ ಇರುವ ಎಲ್ಲರೂ ವೇದೋಪನಿಷತ್ತುಗಳನ್ನು ಕಲಿಯಬಹುದಾಗಿದೆ ಎಂದರು.ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಸುಲೋಚನಾ ಬಿ.ವಿ. ವಂದಿಸಿದರು.