ಅಸಮರ್ಪಕ ಜೀವನಶೈಲಿಯಿಂದ ಯಕೃತ್ ಕಾಯಿಲೆ ಹೆಚ್ಚಳ

| Published : Jun 29 2025, 01:33 AM IST

ಸಾರಾಂಶ

ಇಂದು ಮದ್ಯಪಾನ, ಸ್ಥೂಲಕಾಯ, ಮಾನಸಿಕ ಒತ್ತಡಗಳ ಜೀವನಶೈಲಿಯಿಂದ ಕಾಯಿಲೆಗಳ ಪ್ರಸಂಗಗಳು ಹೆಚ್ಚಾಗುತ್ತಿದೆ. ಅಸಮರ್ಪಕ ಜೀವನಶೈಲಿಯಿಂದ ಯಕೃತ್ ಕಾಯಿಲೆ ಹೆಚ್ಚಳ ಆಗಿದೆ ಎಂದು ಹಿರಿಯ ಮೂಳೆ ಮತ್ತು ಕೀಲು ರೋಗ ತಜ್ಞ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಇಂದು ಮದ್ಯಪಾನ, ಸ್ಥೂಲಕಾಯ, ಮಾನಸಿಕ ಒತ್ತಡಗಳ ಜೀವನಶೈಲಿಯಿಂದ ಕಾಯಿಲೆಗಳ ಪ್ರಸಂಗಗಳು ಹೆಚ್ಚಾಗುತ್ತಿದೆ. ಅಸಮರ್ಪಕ ಜೀವನಶೈಲಿಯಿಂದ ಯಕೃತ್ ಕಾಯಿಲೆ ಹೆಚ್ಚಳ ಆಗಿದೆ ಎಂದು ಹಿರಿಯ ಮೂಳೆ ಮತ್ತು ಕೀಲು ರೋಗ ತಜ್ಞ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ತಿಳಿಸಿದರು.

ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಶನಿವಾರ ಲಿವರ್ ಕ್ಲಿನಿಕ್ ಮತ್ತು ಟ್ರಾನ್ಸ್‌ ಫ್ಲಾಂಟೇಷನ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದ್ದು, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದರೂ ಸರ್ಕಾರ ನೀಡುತ್ತಿರುವ ಕಡಿಮೆ ಶುಲ್ಕದಿಂದಾಗಿ ಖಾಸಗಿ ಆಸ್ಪತ್ರೆಗಳು ಸೇವೆ ನೀಡಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಸರ್ಕಾರ ದರಗಳನ್ನು ಪರಿಷ್ಕರಿಸಲು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಕುಣಿಗಲ್‌ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನಶೈಲಿಯ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಧೂಮಪಾನವನ್ನು ತ್ಯಜಿಸಬೇಕು ಎಂದು ಕರೆ ನೀಡಿದರು.

ಹಿರಿಯ ಲಿವರ್ ತಜ್ಞ ಡಾ. ಸುರೇಶ್ ರಾಘವಯ್ಯ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ವೈದ್ಯಕೀಯ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೇಂದ್ರಪ್ರಸಾದ್, ನಿರ್ದೇಶಕರಾದ ಸುಧಾ ಯೋಗಣ್ಣ, ಡಾ. ಸೀಮಾ ಯೋಗಣ್ಣ, ಝೈಡಸ್ ಕಂಪನಿಯ ಮಹಮದ್ ಜಾವೇದ್ ಇದ್ದರು. ಡಾ. ನಿಬಿನ್ ನಿರೂಪಿಸಿದರು. ಡಾ. ಶರತ್ ಕುಮಾರ್ ಸ್ವಾಗತಿಸಿದರು.