ಕನ್ನಡಪ್ರಭ ವಾರ್ತೆ ಕಾಗವಾಡ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಅಶೋಕ ಶಿಕ್ಷಣ ಪ್ರಸಾರಕ ಮಂಡಳದ ಸಿದ್ದೇಶ್ವರ ಪ್ರೌಢ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಕೊಲ್ಹಾಪೂರದ ಸಿದ್ದಗಿರಿ ಮಹಾಸಂಸ್ಥಾನ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಜೀಗೆ ಸಂಸ್ಥೆಯ ಆಡಳಿತಯಿಂದ ಮಂಡಳಿಯಿಂದ ಆಹ್ವಾನ ನೀಡಲಾಯಿತು.ಶಾಲೆಯ ವಜ್ರಮಹೋತ್ಸವ ಮಾ.15 ರಂದು ಜರುಗಲಿದ್ದು, ಸಂಸ್ಥೆಯ ಅಧ್ಯಕ್ಷ ಶಿವಾನಂದ ಹೊಸಮನಿ, ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ಎ.ಆರ್.ಹುಂಡೇಕರ, ಉಪಾಧ್ಯಕ್ಷ ವಿಠ್ಠಲ ಹಳ್ಳೋಳ್ಳಿ, ಕಾರ್ಯದರ್ಶಿ ಅಶೋಕ ಪಡನಾಡ, ನಿವೃತ್ತ ಮುಖ್ಯೋಪಾಧ್ಯಾಯ ಶಿವಾನಂದ ಹವಳೆ, ಆಡಳಿತ ಮಂಡಳಿ ಸದಸ್ಯರಾದ ಸಿದರಾಯ ಹುಂಡೇಕರ, ಗಜಾನನ ಯರಂಡೋಲಿ, ಮಾಯಪ್ಪ ಮುಂಜೆ, ಎ.ಬಿ.ಪಾಟೀಲ, ಗೋರಕನಾಥ ಕೊಳೇಕರ, ಬಾಹುಬಲಿ ಟೋಪಗಿ, ಈಶ್ವರ ವಾಂಡಿಮಾಳಿ, ವಿರುಪಾಕ್ಷ ಆರಿ, ಮುಖ್ಯೋಪಾಧ್ಯಾಯ ಎಸ್.ಆರ್.ಕೋಳಿ, ಕಾರ್ಯದರ್ಶಿ ಎಲ್.ಟಿ.ಬಬಲಿ ತೆರಳಿ ಶ್ರೀಗಳಿಗೆ ಸನ್ಮಾನಿಸಿ ಆಮಂತ್ರಣ ಪತ್ರಿಕೆ ನೀಡಿ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀಗಳು ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿ ಗಡಿ ಭಾಗದಲ್ಲಿ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣ ಸಂಸ್ಥೆ ಕಟ್ಟಿದ್ದೀರಿ. ಖಂಡಿತವಾಗಿ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದರು.