ಕನ್ನಡಿಗರಿಗೆ ಮಾತೃಭಾಷೆ ಮೇಲೆ ಕಾಳಜಿ ಇರಲಿ: ಎನ್.ಶ್ರೀನಿವಾಸ್

| Published : Nov 03 2025, 02:15 AM IST

ಕನ್ನಡಿಗರಿಗೆ ಮಾತೃಭಾಷೆ ಮೇಲೆ ಕಾಳಜಿ ಇರಲಿ: ಎನ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ರಾಜ್ಯ ಪ್ರಾಂತ್ಯವಾಗಿದ್ದ ವೇಳೆ ಕನ್ನಡ ಚಳವಳಿ ಮೂಲಕ ಅಖಂಡ ಕರ್ನಾಟಕವನ್ನು ಒಂದು ಚೌಕಟ್ಟಿಗೆ ತಂದು, ಕರ್ನಾಟಕ ಏಕೀಕರಣದ ಮೂಲಕ ಸಾಕಷ್ಟು ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ.

ನೆಲಮಂಗಲ:

ಪ್ರತಿಯೊಬ್ಬ ಕನ್ನಡಿಗರು ಮಾತೃಭಾಷೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದಾಗ ಮಾತ್ರ ಭಾಷೆ ಪ್ರಬಲಗೊಳ್ಳಲು ಸಾಧ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ‌

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಅಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ರಾಜ್ಯ ಪ್ರಾಂತ್ಯವಾಗಿದ್ದ ವೇಳೆ ಕನ್ನಡ ಚಳವಳಿ ಮೂಲಕ ಅಖಂಡ ಕರ್ನಾಟಕವನ್ನು ಒಂದು ಚೌಕಟ್ಟಿಗೆ ತಂದು, ಕರ್ನಾಟಕ ಏಕೀಕರಣದ ಮೂಲಕ ಸಾಕಷ್ಟು ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ ಎಂದರು.

ಕಸಾಪ ಅದ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ನಿವೇಶನ ನೀಡಿದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ. ಶಾಸಕರು ಸಾಹಿತ್ಯ ಪರಿಷತ್ತಿಗೆ ನಿವೇಶನ ನೀಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಸಾಧಕರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲೇಶ್‌ ಬೀರಪ್ಪ ಪೂಜಾರ್, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಅಧ್ಯಕ್ಷ ಎನ್‌.ಗಣೇಶ್‌, ಉಪಾಧ್ಯಕ್ಷ ಆನಂದ್‌, ಸದಸ್ಯ ಸಿ.ಪ್ರದೀಪ್‌, ಮಾಜಿ ಅಧ್ಯಕ್ಷೆ ಪೂರ್ಣಿಮಾ, ಕಸಾಪ ಮಾಜಿ ಅಧ್ಯಕ್ಷ ಡಿ.ಸಿದ್ದರಾಜು ಇತರರಿದ್ದರು.

ಪೊಟೊ-1 ಕೆಎನ್ಎಲ್ಎಮ್ 1-

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಎನ್.ಶ್ರೀನಿವಾಸ್‌ ಉದ್ಘಾಟಿಸಿದರು. ತಹಸೀಲ್ದಾರ್ ಮಲ್ಲೇಶ್‌ ಬೀರಪ್ಪ ಪೂಜಾರ್, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಅಧ್ಯಕ್ಷ ಗಣೇಶ್‌, ಉಪಾಧ್ಯಕ್ಷ ಆನಂದ್‌, ಸದಸ್ಯ ಪ್ರದೀಪ್‌, ಮಾಜಿ ಅಧ್ಯಕ್ಷೆ ಪೂರ್ಣಿಮಾ, ಕಸಾಪ ಮಾಜಿ ಅಧ್ಯಕ್ಷ ಸಿದ್ದರಾಜು ಇತರರಿದ್ದರು.