ಸಂಗೀತ ಕಲಿಕೆಯಿಂದ ಶಿಕ್ಷಣಕ್ಕೆ ಅಡ್ಡಿಯಾಗದು: ವಿ.ನೈಬಿ ಪ್ರಭಾಕರ್‌

| Published : Jun 25 2025, 11:47 PM IST

ಸಂಗೀತ ಕಲಿಕೆಯಿಂದ ಶಿಕ್ಷಣಕ್ಕೆ ಅಡ್ಡಿಯಾಗದು: ವಿ.ನೈಬಿ ಪ್ರಭಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗ​ಳೂ​ರಿನ ಸ್ವರಾಲಯ ಸಾಧನ ಫೌಂಡೇಶನ್‌ ಹಾಗೂ ಕಲಾ ಶಾಲೆ ವತಿಯಿಂದ ಮಂಗ​ಳೂ​ರಿನ ಪಾ​ಲೆ​ಮಾರ್‌ ಗಾ​ರ್ಡನ್‌ನಲ್ಲಿ ನ​ಡೆದ ಸ್ವ​ರಾ​ಲಯ ಸಾ​ಧನಾ ಶಿಬಿರದಲ್ಲಿ ‘ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಗೀತ ಅಭ್ಯಾಸ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಗೀತ ಕಲಿಕೆ ಶಿಕ್ಷಣಕ್ಕೆ ಪೂ​ರ​ಕ​ವಾ​ಗು​ತ್ತ​ದೆಯೇ ವಿನಃ ಯಾ​ವುದೇ ರೀ​ತಿ​ಯಲ್ಲೂ ಅಡ್ಡಿಯಾಗದು ಎಂದು ಖ್ಯಾತ ಮೃದಂಗ ವಾದಕ ಶೃಂಗೇರಿಯ ವಿದ್ವಾನ್‌ ನೈಬಿ ಪ್ರಭಾಕರ್‌ ಅಭಿಪ್ರಾಯಪಟ್ಟರು.

ಮಂಗ​ಳೂ​ರಿನ ಸ್ವರಾಲಯ ಸಾಧನ ಫೌಂಡೇಶನ್‌ ಹಾಗೂ ಕಲಾ ಶಾಲೆ ವತಿಯಿಂದ ಮಂಗ​ಳೂ​ರಿನ ಪಾ​ಲೆ​ಮಾರ್‌ ಗಾ​ರ್ಡನ್‌ನಲ್ಲಿ ನ​ಡೆದ ಸ್ವ​ರಾ​ಲಯ ಸಾ​ಧನಾ ಶಿಬಿರದಲ್ಲಿ ‘ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳು 9ನೇ ತರಗತಿ ವರೆ​ಗೆ ​ನಿ​ಷ್ಠೆ​ಯಿಂದ ಸಂಗೀತ ಅಭ್ಯಾಸವನ್ನು ಮಾಡಿಸುತ್ತಾರೆ. ಆದರೆ ಎಸ್‌ಎಸ್‌ಎಲ್‌ಸಿಗೆ ಬಂದ ಕೂಡಲೇ ಸಂಗೀ​ತ​ ಕ​ಲಿ​ಕೆ​ ತಮ್ಮ ಮ​ಕ್ಕ​ಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಅಭ್ಯಾಸದಿಂದ ದೂರ ಮಾಡುತ್ತಾರೆ. ಇದೊಂದು ತಪ್ಪು ತಿಳಿವಳಿಕೆ ಹಾಗೂ ತಪ್ಪು ನಡೆಯಾಗಿದೆ. ಯಾವತ್ತೂ ಮಕ್ಕಳನ್ನು ಸಂಗೀತ ಕ​ಲಿ​ಕೆ​ಯಿಂದ ದೂರ ಮಾಡಬೇಡಿ ಎಂದು ಅವರು ಹೇ​ಳಿ​ದರು.ನೈಬಿ ಪ್ರಭಾಕರ್‌ ಅ​ವರ ಪತ್ನಿ ವಿ​ದುಷಿ ಸಾ​ವಿತ್ರಿ ಪ್ರ​ಭಾ​ಕರ್‌ ಮಾ​ತ​ನಾಡಿ, ವಿ​ದ್ಯಾ​ರ್ಥಿ​ಗ​ಳಿಗೆ ಶಾಲಾ ಪ​ರೀ​ಕ್ಷೆ​ಗ​ಳಲ್ಲಿ ನೂ​ರಕ್ಕೆ ನೂರು ಅಂಕ ಪ​ಡೆ​ಯ​ಬೇಕು ಎಂಬ ಛಯ ಇ​ದ್ದಂತೆ, ಸಂಗೀ​ತ​ದಲ್ಲೂ ಅಂತಹ ಛಲ ಇ​ರಲೇಬೇಕು. ಹಾ​ಗಿ​ದ್ದರೆ ಮಾತ್ರ ಸಂಗೀತದಲ್ಲಿ ಏ​ಳಿಗೆ ಕಾ​ಣಲು ಸಾಧ್ಯ. ಮು​ಖ್ಯ​ವಾಗಿ ಸಂಗೀ​ತ​ದಲ್ಲಿ ಗುರು ಹಾಗೂ ಗು​ರಿ ಇ​ರ​ಬೇ​ಕು. ಒಂದು ಬಾರಿ ವೇ​ದಿ​ಕೆ​ಯಲ್ಲಿ ಕಾ​ರ್ಯ​ಕ್ರಮ ನೀ​ಡಿದ ಬ​ಳಿಕ ಮುಂದಿನ ಬಾರಿ ಇ​ದ​ಕ್ಕಿಂತಲೂ ಉ​ತ್ತಮ ಕಾ​ರ್ಯ​ಕ್ರಮ ನೀ​ಡುವ ಪ್ರ​ಯತ್ನ ಮಾ​ಡ​ಬೇಕು. ಇ​ದಕ್ಕೆ ಪೋ​ಷ​ಕರು ಸದಾ ಮ​ಕ್ಕಳಿ​ಗೆ ಬೆಂಬ​ಲ​ವಾಗಿ ನಿ​ಲ್ಲ​ಬೇಕು ಎಂದು ಹೇ​ಳಿ​ದ​ರು.

ಹಿ​ರಿಯ ಪ​ತ್ರ​ಕರ್ತ ಆ​ರ್‌.​ಸಿ.​ಭಟ್‌ ಸಂವಾದ ನ​ಡೆ​ಸಿ​ಕೊ​ಟ್ಟ​ರು.