ಸಾರಾಂಶ
-ಕಡೂರಿನಲ್ಲಿ ಟ್ಯಾಕ್ಸಿ ನಿಲ್ದಾಣ ಲೋಕಾರ್ಪಣೆ ಮಾಡಿದ ಶಾಸಕ ಕೆಎಸ್.ಆನಂದ
-----ಕನ್ನಡಪ್ರಭ ವಾರ್ತೆ ಕಡೂರು
ಜರ್ಮನ್ ಶೀಟ್ ಟ್ಯಾಕ್ಸಿ ನಿಲ್ದಾಣದ ನಿರ್ಮಾಣಕ್ಕೆ 35ಲಕ್ಷ ರೂ. ಅನುದಾನ ನೀಡಿ ಗಮನ ಸೆಳೆಯುವಂತೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಅವರು ಕಡೂರು ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ನೂತನ ಟ್ಯಾಕ್ಸಿ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಚೆಕ್ ಪೋಸ್ಟ್, ಬಸ್ಸ್ಟಾಂಡ್ ನಲ್ಲಿ ಎರಡು ಆಟೋ ಸ್ಟ್ಯಾಂಡ್ ನಿರ್ಮಾಣ ಆಗಿವೆ, ಕನಕ ವೃತ್ತ, ವೀರಭದ್ರೇಶ್ವರ ಆಟೋ ನಿಲ್ದಾಣ, ಮರವಂಜಿ ವೃತ್ತದಲ್ಲೂ ಪುರಸಭೆ ಸಹಯೋಗದಲ್ಲಿ ಆಟೋ ನಿಲ್ದಾಣ ಆಗಲಿವೆ. ಶಾಸಕರ ಪ್ರದೇಶಾಭಿವೃದ್ಧಿ ವಿವೇಚನಾ ನಿಧಿಯಿಂದ ಈ ಕಾಮಗಾರಿ ನಡೆಯುತ್ತಿವೆ. ಬೀರೂರಿನಲ್ಲೂ ಟ್ಯಾಕ್ಸಿ ಸ್ಟ್ಯಾಂಡ್ ಮಾಡಲಾಗುತ್ತಿದೆ. ಬೀರೂರಿನಲ್ಲಿ ಬಸ್ ಶೆಟ್ಟರ್ ಸಹ ಮಾಡಲಾಗುತ್ತಿದ್ದು, ಹೂವಿನ ಸ್ಟಾಲ್ ಗಳ ನಿರ್ಮಾಣಕ್ಕೆ 20 ಲಕ್ಷ ನೀಡಿದ್ದು ಉತ್ತಮ ಹೂವಿನ ಮಾರುಕಟ್ಟೆ ಆಗಲಿದೆ ಎಂದರು.ಕಡೂರಿನಲ್ಲೂ ಪುಡ್ ಕೋರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಆಹ್ವಾನ ಪತ್ರಿಕೆಯಲ್ಲಿ ಪುರಸಭೆ ಅಧ್ಯಕ್ಷರ ಹೆಸರಿನ ಕುರಿತು ಆದ ಪ್ರಮಾದ ಸರಿಪಡಿಸಿ ಶಿಲಾ ಫಲಕದಲ್ಲಿ ಹೆಸರು ಹಾಕಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಆನಂದ್ ಸೂಚನೆ ನೀಡಿದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಚಾಲಕರಿಗೆ ನಿವೇಶನಕ್ಕಾಗಿ ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಶಾಸಕರೊಂದಿಗೆ ಸಮಾಲೋಚಿಸಿ ಜಾಗ ಖರೀದಿಸಿ ನಿವೇಶನ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್ ಅವರು ಕ್ಷೇತ್ರಕ್ಕೆ ಅಪರೂಪವಾಗುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆ ಕೇಳಲು ಮುಂದಾಗಬೇಕು. ಶಾಸಕ ಆನಂದ್ ಅವರು ಸಂಸದರನ್ನು ಕರೆತಂದು ಕ್ಷೇತ್ರದಲ್ಲಿ ಅವರಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮನವಿ ಮಾಡಬೇಕು. ಅವರ ಕಚೇರಿ ತೆರೆಯಬೇಕು ಎಂದು ಹೇಳಿದರು.50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಅಗತ್ಯವಿದ್ದು 43 ಕೋಟಿ ರೂ. ಗಳಲ್ಲಿ ಟ್ಯಾಂಕರ್ ನಿರ್ಮಾಣ ಈಗಾಗಲೇ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿ. ಪಂ. ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರದ ಜಾಗಗಳಲ್ಲಿ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣ ಮಾಡಿದರೂ ಅದಕ್ಕೆ ಸಂಭಂದಪಟ್ಟ ದಾಖಲೆಗಳನ್ನು ಪುರಸಭೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಹಿರಿಯ ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಒಗ್ಗಟ್ಟಾಗಿ ಶಾಸಕರನ್ನು ಗೆಲ್ಲಿಸಿದ್ದೇವೆ. ಆದರೆ, ಕೆಲವರು ಅವರನ್ನು ಸೋಲಿಸುವ ತಂತ್ರ ಮಾಡಿದರು ಎಂದು ಆರೋಪಿಸಿದರು. ಚಾಲಕರಿಗೆ ನಿವೇಶನ ನೀಡಿಕೆ ಸಂಬಂಧ ಶಾಸಕರು ಹಾಗೂ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ವಿನೋದ್ ಮಾತನಾಡಿ, ಚಾಲಕರು, ಮಾಲೀಕರಿಗೆ ನಿವೇಶನ ನೀಡುವಂತೆ ಮನವಿ ನೀಡಿದರು.ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಪುರಸಭೆ ಸದಸ್ಯರು ಮನು ಮರಗುದ್ದಿ, ಸೈಯದ್ ಯಾಸೀನ್, ಉಮೇಶ್, ಜ್ಯೋತಿ ಆನಂದ್, ಸಂಘದ ಪ್ರ. ಕಾ. ರಾಕೇಶ್ ಎಂ. ಟಿ ಮತ್ತು ಕೆ ಆರ್ ಐ ಡಿ ಎಲ್ ಇಂಜಿನಿಯರ್ ಅನಿತಾ, ಸಿಬ್ಬಂದಿ ಗಿರೀಶ್, ಮಂಜುನಾಥ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
--ಫೋಟೊ:ಶಾಸಕ ಕೆಎಸ್.ಆನಂದ್ ಅವರು ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಇರುವ ಟ್ಯಾಕ್ಸಿ ನಿಲ್ದಾಣವನ್ನು ಉದ್ಘಾಟಿಸಿದರು.
24 ಕೆಕೆಡಿಯು1.