ಬೀದರ್: ನಗರದ ಪಾಪನಾಶ ಮಹಾದೇವ ಟ್ರಸ್ಟ್ ವತಿಯಿಂದ ಶ್ರಾವಣ ನಿಮಿತ್ತ ಇಲ್ಲಿಯ ಪಾಪನಾಶ ದೇಗುಲ ದಲ್ಲಿ ಆಗಸ್ಟ್ 12 ರಿಂದ ಸೆ.11ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಅನ್ನ ಪ್ರಸಾದ ವಿತರಣೆ, ರಾತ್ರಿ 8.30 ರಿಂದ 10.30 ರ ವರೆಗೆ ಸಂಗೀತ ಹಾಗೂ ಭಜನೆ ಜರುಗಲಿದೆ. ಆ.17, 24, 31 ಹಾಗೂ ಸೆ.7 ರಂದು ಬೆಳಿಗ್ಗೆ 6ಕ್ಕೆ ಖಾನಾಪುರ ಸಮೀಪದ ಗಾಯ ಮುಖ ಗುಪ್ತಲಿಂಗೇಶ್ವರ ಮಂದಿರದಿಂದ ಪಾಪನಾಶ ದೇವಸ್ಥಾನದ ವರೆಗೆ ಕಾವಡ ಯಾತ್ರೆ ನಡೆಯಲಿದೆ ಎಂದು ಪಾಪನಾಶ ಮಹಾದೇವ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಶೆಟಕಾರ್ ತಿಳಿಸಿದ್ದಾರೆ. ಭಕ್ತರು ಶ್ರಾವಣ ಕಾರ್ಯಕ್ರಮ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

--ಚಿತ್ರ 10ಬಿಡಿಆರ್59