ಸಾರಾಂಶ
ದೊಡ್ಡಬಳ್ಳಾಪುರ: ನಗರದ ಹಾಲಿನ ಡೈರಿ ಬಳಿಯಲ್ಲಿರುವ ಸರ್ಕಾರಿ ಕುಂಟೆಯನ್ನು ಭೂಗಳ್ಳರಿಂದ ಉಳಿಸುವ ಸಲುವಾಗಿ ಇದೇ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣ ಎಚ್ಚರಿಕೆ ನೀಡಿದೆ.
ದೊಡ್ಡಬಳ್ಳಾಪುರ: ನಗರದ ಹಾಲಿನ ಡೈರಿ ಬಳಿಯಲ್ಲಿರುವ ಸರ್ಕಾರಿ ಕುಂಟೆಯನ್ನು ಭೂಗಳ್ಳರಿಂದ ಉಳಿಸುವ ಸಲುವಾಗಿ ಇದೇ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣ ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ದೊಡ್ಡಬಳ್ಳಾಪುರ ತಾಲೂಕು, ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರಲ್ಲಿ 2ಎಕರೆ 04 ಗುಂಟೆ ಭೂಮಿ ಇದೆ. ಇದು ಸರ್ಕಾರಿ ಕುಂಟೆಯಾಗಿದ್ದು ಸೋಮೇಶ್ವರ ಕುಂಟೆ ಎಂದು ದಾಖಲಾತಿಗಳಲ್ಲಿ ನಮೂದಾಗಿದೆ. ಸದರಿ ಭೂಮಿಯ ಸ್ವಯಂಭುವೇಶ್ವರ ದೇವಸ್ಥಾನದ ಹತ್ತಿರವಿದೆ. ಆದರೆ 2 ಎಕರೆ 04 ಗುಂಟೆ ಬದಲಿಗೆ ಪಹಣಿಯಲ್ಲಿ 0.00 ಎಂದು ನಮೂದು ಆಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಈ ಹಿಂದೆ ಇದೇ ಸದರಿ ಜಾಗದಲ್ಲಿ ಅಶಕ್ತ ಬಡವರೊಬ್ಬರು ಮನೆ ಕಟ್ಟಿಕೊಂಡಿದ್ದರು, ಅದು ಅಕ್ರಮ ಕಟ್ಟಡವೆಂದು ಯಾವುದೇ ದಯೆ ದಾಕ್ಷಿಣ್ಯವಿಲ್ಲದೆ ಅಧಿಕಾರಿಗಳು ದ್ವಂಸ ಮಾಡಿದ್ದರು ಎಂದು ಆರೋಪಿಸಿದರು.ಸದರಿ ಭೂಮಿಯ ವಿಸ್ತೀರ್ಣ 2 ಎಕರೆ 04 ಗುಂಟೆ ಬದಲಿಗೆ 0.00 ಎಂದು ನಮೂದಾಗಿರುವುದನ್ನು ನಮ್ಮ ಸಂಘಟನೆ ಖಂಡಿಸಿತ್ತು. ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಯಾವುದಾದರೂ ಇತರ ಖಾತೆಗಳು ಇದ್ದಲ್ಲಿ ಅವುಗಳನ್ನು ರದ್ದು ಮಾಡಬೇಕೆಂದು ದಿನಾಂಕ: 25-03-2025 ರಂದು ನಮ್ಮ ಸಂಘಟನೆಯಿಂದ ಮಾನ್ಯ ಶಾಸಕರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮಾನ್ಯ ತಹಶೀಲ್ದಾರ್ ರವರಿಗೆ, ಮಾನ್ಯ ಉಪವಿಭಾಗಾಧಿಕಾರಿಗಳಿಗೆ, ಮಾನ್ಯ ಪೌರಾಯುಕ್ತರಿಗೆ, ಹಾಗೂ ಮಾನ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಮನವಿಯನ್ನು ಸಲ್ಲಿಸಿದ್ದೆವು.
ನಮ್ಮ ಸಂಘಟನೆಯ ಮನವಿಯ ಮೇರೆಗೆ ಇದೀಗ ಸರ್ಕಾರದಿಂದ ಸರ್ವೇ ನಡೆಸಿದ್ದು, ನಕಾಶೆಯಲ್ಲಿ ಭೂಗಳ್ಳರ ಹಸ್ತಕ್ಷೇಪದಿಂದ ಸದರಿ ಜಾಗದ ಒಂದಷ್ಟು ಭಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಆದರೆ, ತಾಲೂಕು ಆಡಳಿತ ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿರುವುದನ್ನು ಖಂಡಿಸಿ ಆ.15ರ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡುವುದಾಗಿ ತಿಳಿಸಿದರು.14ಕೆಡಿಬಿಪಿ2- ಭೂಗಳ್ಳರಿಂದ ಒತ್ತುವರಿಯಾಗಿದೆ ಎನ್ನಲಾದ ಕುಂಟೆ ಪ್ರದೇಶ.