ಅದ್ಧೂರಿಯಾಗಿ ಜರುಗಿದ ಶರಣಬಸವಪ್ಪ ಅಪ್ಪಾಜಿ ಜನ್ಮದಿನೋತ್ಸವ

| Published : Nov 16 2023, 01:18 AM IST

ಅದ್ಧೂರಿಯಾಗಿ ಜರುಗಿದ ಶರಣಬಸವಪ್ಪ ಅಪ್ಪಾಜಿ ಜನ್ಮದಿನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಪಾಡ್ಯ ದಿನವಾದ ನ.14 ರಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿಯವರ ಜನ್ಮದಿನೋತ್ಸವ ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.

ಡಾ.ಶರಣಬಸವಪ್ಪ ಅಪ್ಪಾಜಿ ಶತಾಯುಷಿಗಳಾಗಲೆಂದು ಭಕ್ತರ ಹಾರೈಕೆ

ಕನ್ನಡಪ್ರಭ ವಾರ್ತೆ ಕಲಬುರಗಿ

ದೀಪಾವಳಿ ಪಾಡ್ಯ ದಿನವಾದ ನ.14 ರಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿಯವರ ಜನ್ಮದಿನೋತ್ಸವ ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಸಂಭ್ರಮದಿಂದ ನಡೆಯಿತು. ದೀಪಾವಳಿ ಪಾಡ್ಯಮಿ ದಿನದ ಸಂಭ್ರಮದಂದು ಅಪ್ಪಾಜಿ ಜನ್ಮದಿನೋತ್ಸವ, ಹೀಗಾಗಿ ಎಲ್ಲೆಡೆ ಹಬ್ಬದ ವಾತಾವರಣ, ಎಲ್ಲೆಡೆ ಸಂತಸದಲ್ಲಿದ್ದಂಹ ಜನಜಂಗುಳಿ ಕಂಡಿತ್ತು. ಅವರೆಲ್ಲರೂ ಅಪ್ಪಾಜಿ ಹುಟ್ಟುಹಬ್ಬಕ್ಕೆ ಶುಭ ಕೋರಲು ಆಗಮಿಸಿದ್ದರು.

ಡಾ.ಅಪ್ಪಾಜಿಯವರು ದೀರ್ಘಾಯುಷಿಗಳಾಗಲೆಂದು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ಮೊರೆ ಹೋದ ಭಕ್ತರ ದಂಡು, ಶರಣಬಸವೇಶ್ವರ ಮಹಾರಾಜ ಕೀ ಜೈ ಎಂಬ ಭಕ್ತರ ಜಯಘೋಷ ಒಂದು ಕಡೆಯಾದರೆ ಶಾಲು, ಹಾರತುರಾಯಿ, ಹಣ್ಣುಹಂಪಲು, ಸಿಹಿ ಹಿಡಿದುಕೊಂಡು ಸಂಭ್ರಮದಿಂದ ಮಹಾದಾಸೋಹ ಮಹಾಮನೆಗೆ ಹೆಜ್ಜೆ ಹಾಕುತ್ತಿರುವ ಗಣ್ಯರ ಸಾಲು ಇನ್ನೊಂದೆಡೆ ಕಂಡು ಬಂತು.

ಡಾ.ಶರಣಬಸವಪ್ಪ ಜನ್ಮದಿನೋತ್ಸವದಲ್ಲಿ ಧರ್ಮ ಪತ್ನಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ಅವರು ಜನ್ಮದಿನೋತ್ಸವ ಆಚರಣೆಯಲ್ಲಿ ಪಾಲ್ಗೊಂಡು, ಜನ್ಮದಿನೋತ್ಸವದ ಶುಭಕೋರಲು ಬಂದ ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.

ಡಾ.ಅಪ್ಪಾಜಿಯವರ ಮಕ್ಕಳಾದ ಶಿವಾನಿ, ಭವಾನಿ, ಮಹೇಶ್ವರಿ ಸೇರಿಕೊಂಡು ಅಪ್ಪಾಜಿಯವರಿಗೆ 89 ತುಪ್ಪದ ದೀಪಗಳನ್ನು ಹಚ್ಚಿ ಆರತಿ ಮಾಡಿ ಉಡುಗೊರೆ ನೀಡಿದ್ದು ವಿಶೇಷವಾಗಿತ್ತು. ಈ ಜನ್ಮದಿನೋತ್ಸವದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಸಮಕುಲಪತಿ ಡಾ.ಎನ್.ಎಸ್ ದೇವರಕಲ್, ಪ್ರೊ.ವಿ. ಡಿ. ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಕುಲಸಚಿವ(ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ, ಪತ್ರಿಕೋದ್ಯಮ ವಿಭಾಗ ಟಿ.ವಿ.ಶಿವಾನಂದನ್ ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಸೇರಿ ನಗರದ ಇತರೆ ಗಣ್ಯ ಅಪ್ಪಾಜಿಯವರಿಗೆ ಶುಭಕೋರಿದರು. ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲಾಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಪ್ಪಾಜಿಯವರಿಗೆ ಜನ್ಮದಿನೋತ್ಸವದ ಶುಭಕೋರಿ ಸಂಭ್ರಮಿಸಿದರು. ಎಲ್ಲಾ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.15ಜಿಬಿ1 ಮತ್ತು 15ಜಿಬಿ2

ಕಲಬುರಗಿಯಲ್ಲಿ ನಡೆದ ಶರಣಬಸವೇಶ್ವರ ದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಜನ್ಮದಿನೋತ್ಸವದಂದು ಗಣ್ಯರು ಶುಭ ಕೋರಿದರು. ಮಕ್ಕಳು 89 ದೀಪಗಳನ್ನು ಬೆಳಗುವ ಮೂಲಕ ತಂದೆಗೆ ಹುಟ್ಟುಹಬ್ಬದ ಕೊಡುಗೆ ನೀಡಿ ಸಂಭ್ರಮಿಸಿದರು.