ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ಅರಿವು ತಿಳಿಯಲಿ

| Published : May 22 2025, 11:46 PM IST

ಸಾರಾಂಶ

ಪುಸ್ತಕಗಳ ನಿರಂತರ ಅಧ್ಯಯನದಿಂದ ವಿಶೇಷ ಜ್ಞಾನ ಪಡೆಯಲು ಸಾಧ್ಯ. ಕನ್ನಡ ಭಾಷೆ ಶ್ರೀಮಂತವಾಗಿದ್ದು ಕಥೆ, ಕಾದಂಬರಿ, ಕಾವ್ಯ ಮತ್ತು ವಿಶೇಷವಾಗಿ ಚುಟುಕು ಕಾವ್ಯಗಳು ವಿದ್ಯಾರ್ಥಿಗಳ ಪ್ರಭಾವಶಾಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡಲಿವೆ

ಧಾರವಾಡ: ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕ್ಷೇತ್ರಗಳ ಅರಿವು ತಿಳಿದುಕೊಳ್ಳುವಿಕೆಯತ್ತ ವಿದ್ಯಾರ್ಥಿಗಳು ತಮ್ಮ ಚಿತ್ತ ಹರಿಸಬೇಕು. ಆ ಮೂಲಕ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.

ಇಲ್ಲಿಯ ಜೆಎಸ್ಸೆಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಪುಸ್ತಕಗಳ ನಿರಂತರ ಅಧ್ಯಯನದಿಂದ ವಿಶೇಷ ಜ್ಞಾನ ಪಡೆಯಲು ಸಾಧ್ಯ. ಕನ್ನಡ ಭಾಷೆ ಶ್ರೀಮಂತವಾಗಿದ್ದು ಕಥೆ, ಕಾದಂಬರಿ, ಕಾವ್ಯ ಮತ್ತು ವಿಶೇಷವಾಗಿ ಚುಟುಕು ಕಾವ್ಯಗಳು ವಿದ್ಯಾರ್ಥಿಗಳ ಪ್ರಭಾವಶಾಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಡಾ. ಸೂರಜ ಜೈನ್ ಮಾತನಾಡಿ, ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕ. ಹೀಗಾಗಿ ವಿದ್ಯಾರ್ಥಿಗಳು ಕಲೆ, ಕ್ರೀಡೆ ಸೇರಿದಂತೆ ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸನ್ನದ್ಧರಾಗಬೇಕು ಎಂದರು.

ಸಿದ್ಧಲಿಂಗಯ್ಯ ಹಿರೇಮಠ ಹಾಗೂ ದಾನೇಶ್ವರಿ ಅಂಗಡಿ ನಿರೂಪಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು. ರಂಜಿತಾ ಬಳಿಗೇರಿ ಸ್ವಾಗತಿಸಿದರು. ಸಂಹಿತಾ ಹೆಗಡೆ ವಂದಿಸಿದರು. ಡಾ.ಕೆ.ಎಚ್. ನಾಗಚಂದ್ರ, ಪ್ರೊ. ವಿವೇಕ ಲಕ್ಷ್ಮೇಶ್ವರ, ಡಾ. ಆರ್.ವಿ. ಚಿಟಗುಪ್ಪಿ, ಪ್ರೊ. ಎನ್.ಜಿ. ಪುಡಕಲಕಟ್ಟಿ, ಪ್ರೊ. ಶ್ರೀಕಾಂತ ರಾಗಿಕಲ್ಲಾಪುರ, ಶ್ರವಣಕುಮಾರ ಯೋಗಿ, ಜಿನ್ನಪ್ಪ ಕುಂದಗೋಳ, ಪಲ್ಲವಿ ಸುಂಕದ ಮತ್ತಿತರರು ಇದ್ದರು.