ಮಹಿಳಾ ಸಾಧಕಿಯರ ಕೊಡುಗೆ ಸ್ಮರಿಸಬೇಕು

| Published : Mar 21 2025, 12:30 AM IST

ಸಾರಾಂಶ

ಪ್ರಪಂಚಕ್ಕೆ ಮತ್ತು ದೇಶಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ಸ್ಮರಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ ಉದ್ದೇಶ ಆಗಿದೆ, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕಾರ್ಮಿಕ ಕಾನೂನುಗಳಾದ ಕನಿಷ್ಠ ವೇತನ ಕಾಯ್ವೆ ಬೋನಸ್ ಕಾಯ್ದೆ ಹಾಗೂ ಕಾರ್ಮಿಕ ವಿವಾದಗಳ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮಹಿಳೆಯು ಅಬಲೆ ಅಲ್ಲಾ ಸಬಲೆ ಎಂಬುದನ್ನು ಎಲ್ಲಾ ರಂಗಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್ ಹೊಸಮನಿ ತಿಳಿಸಿದರು.ವಿಶ್ವ ಮಹಿಳಾ ದಿನಾಚರಣೆಯ ಹಾಗೂ ವಿಶ್ವ ಗ್ರಾಹಕರ ಹಕ್ಕುಗಳ ದಿನ ಅಂಗವಾಗಿ ಮಾಲೂರಿನ ಸಿಲ್ವರ್ ಕ್ರಸ್ಟ್ ಕ್ಲಾತಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಾಧಕರನ್ನು ಸ್ಮರಿಸಿ

ನಮ್ಮ ರಾಷ್ಟ್ರಪತಿಗಳಾದ ದ್ರೌಪದಿಮುರ್ಮು ಬುಡಕಟ್ಟು ಜನಾಂಗದಿಂದ ಬಂದು ನಮ್ಮ ದೇಶದ ಪ್ರಥಮ ಪ್ರಜೆ ಆಗಿರುತ್ತಾರೆ. ಪ್ರಪಂಚಕ್ಕೆ ಮತ್ತು ದೇಶಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ಸ್ಮರಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ ಉದ್ದೇಶ ಆಗಿದೆ, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕಾರ್ಮಿಕ ಕಾನೂನುಗಳಾದ ಕನಿಷ್ಠ ವೇತನ ಕಾಯ್ವೆ ಬೋನಸ್ ಕಾಯ್ದೆ ಹಾಗೂ ಕಾರ್ಮಿಕ ವಿವಾದಗಳ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಕಾನೂನು ಅರಿವು ಕಾರ್ಯಕ್ರಮ

ಆ ಹಿನ್ನೆಲೆಯಲ್ಲಿ ಈ ದಿವಸ ಗಾಮೆಂಟ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರ ಕಾನೂನುಗಳ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ, ಕಾನೂನುಗಳ ಅಡಿಯಲ್ಲಿ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಹಾಗೂ ಸಮಸ್ಕೆಗಳ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಆರ್, ಕಾರ್ಮಿಕ ನಿರೀಕ್ಷಕ ರೇಣುಕಾ ಪ್ರಸನ್ನ, ಸಿಲ್ವರ್ ಕ್ರಸ್ಟ್ ಪ್ರೈವೇಟ್‌ ಲಿಮಿಟೆಡ್ ಮೇಲ್ವಿಚಾರಕಿ ಸೌಮೃ, ಜಾನಪದ ಕಲಾವಿದ ಬಿ. ವೆಂಕಟಾಚಲಪತಿ ಇದ್ದರು.