ಶಿವಮೊಗ್ಗ: ನಟ ವಿನಯ್ ರಾಜ್ ಅಭಿನಯದ ಮತ್ತು ಎ.ಎನ್.ಮುತ್ತು ನಿರ್ದೇಶನದ ಭರವಸೆ ಚಲನಚಿತ್ರವು ಆ.8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಿ.ಸಿ.ನಾಗರಾಜ್ ತಿಳಿಸಿದರು.ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಈ ಚಿತ್ರದಲ್ಲಿ ಬಹುತೇಕ ಶಿವಮೊಗ್ಗದ ಕಲಾವಿದರೇ ನಟಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳು ಮತ್ತು 4 ಸಾಹಸ ದೃಶ್ಯಗಳಿದ್ದು, ಇದರ ಶೇ.50-60ರಷ್ಟು ಚಿತ್ರೀಕರಣವನ್ನು ಶಿವಮೊಗ್ಗದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲಾಗಿದೆ. ರಾಜ್ಯದ 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದರು.ಚಿತ್ರದ ನಿರ್ದೇಶಕ ಎ.ಎನ್.ಮುತ್ತು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಭರವಸೆಯ ಮೇಲೆ ಬದುಕುತ್ತಾನೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಉತ್ತಮ ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ. ಈ ಚಿತ್ರದಲ್ಲಿ ವಿನಯ್ ರಾಜ್ ನಾಯಕನಾಗಿ ಮತ್ತು ಅಹಲ್ಯಾ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಬಿ.ಸಿ.ನಾಗರಾಜ್ ಅವರು ಕೂಡ ಎರಡನೇ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂತೋಷ್, ಚೇತನಾ ಶೆಟ್ಟಿ, ಗುರುಮೂರ್ತಿ, ಅರ್ಚನಾ ನಿರಂಜನ್, ಸ್ನೇಕ್ ಸುಹಾಸ್, ಸಿದ್ಧಾರ್ಥ ಮುಂತಾದವರಿದ್ದರು.
ಆ.8ರಂದು ರಾಜ್ಯಾದ್ಯಂತ ಭರವಸೆ ಚಿತ್ರ ಬಿಡುಗಡೆ
ನಟ ವಿನಯ್ ರಾಜ್ ಅಭಿನಯದ ಮತ್ತು ಎ.ಎನ್.ಮುತ್ತು ನಿರ್ದೇಶನದ ಭರವಸೆ ಚಲನಚಿತ್ರವು ಆ.8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಿ.ಸಿ.ನಾಗರಾಜ್ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.