ಸಾರಾಂಶ
ಪಿಟಿಐ ಚೆನ್ನೈ
ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಮೂಲಕ ಮತದಾರರಿಗೆ ಭರವಸೆಗಳನ್ನು ನೀಡುವ ಹಕ್ಕು ರಾಜಕೀಯ ಪಕ್ಷಗಳಿಗೆ ಇದೆ.
ಅದೇ ರೀತಿ ಆ ಭರವಸೆಗಳು ನೈಜವೇ ಹಾಗೂ ಅವನ್ನು ಈಡೇರಿಸಲು ಯಾವ ರೀತಿ ಸಂಪನ್ಮೂಲ ಹೊಂದಿಸಲಾಗುತ್ತದೆ ಎಂಬುದನ್ನು ತಿಳಿಯುವ ಹಕ್ಕು ಕೂಡ ಮತದಾರರಿಗೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಆದರೆ ಈ ವಿಚಾರ ಸದ್ಯ ಕೋರ್ಟ್ನಲ್ಲಿದೆ ಎಂದೂ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಭರವಸೆಗಳನ್ನು ಘೋಷಣೆ ಮಾಡಲು ರಾಜಕೀಯ ಪಕ್ಷಗಳಿಗಾಗಿ ಆಯೋಗ ಅರ್ಜಿಯೊಂದನ್ನು ಸಿದ್ಧಪಡಿಸಿದೆ.
ಆದರೆ ಆ ವಿಷಯವೂ ಕೋರ್ಟ್ನಲ್ಲಿರುವ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ಕಟ್ಟೆಚ್ಚರದಿಂದ ಇರುವಂತೆ ಹಾಗೂ ನಗದು- ಉಡುಗೊರೆಗಳ ವಿತರಣೆ ತಡೆಯುವಂತೆ ಕಾನೂನು ಅನುಪಾಲನಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
ಆನ್ಲೈನ್ ವಹಿವಾಟುಗಳ ಮೇಲೆ ನಿಗಾ ಇಡುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೆಷನ್ ಆಫ್ ಇಂಡಿಯಾಗೆ ಹೊಣೆ ವಹಿಸಲಾಗಿದೆ ಎಂದು ಹೇಳಿದರು.