ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ನೆರವು: ಶಾಸಕ ಕೆ.ಎಂ.ಉದಯ್

| Published : Sep 20 2024, 01:34 AM IST

ಸಾರಾಂಶ

ಟಾಟಾ ಏಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ನಿಯಮ ಬಾಹಿರವಾಗಿದ್ದರೂ ಅದು ಹಿಂದಿನಿಂದಲೂ ಆ ಸಂಸ್ಕೃತಿ ಜನರಲ್ಲಿ ಬೆಳೆದುಬಂದಿದೆ. ತುರ್ತು ಸಂದರ್ಭಗಳಲ್ಲಿ ಬೇರೆಡೆ ಹೋಗಲು ಈ ವಾಹನಗಳನ್ನು ಅವಲಂಭಿಸುತ್ತಾರೆ. ಪೊಲೀಸರು ಇದನ್ನು ತಡೆಗಟ್ಟುವ ಅವಶ್ಯಕತೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಮಣಿಗೆರೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ನೆರವು ನೀಡುವುದಾಗಿ ಶಾಸಕ ಕೆ.ಎಂ.ಉದಯ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರಿಗೆ ಕಾಲು ಮುರಿದಿದೆ. ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಮತ್ತು ನೆರವು ಬೇಕಾದಲ್ಲಿ ಒದಗಿಸಲಾಗುವುದು ಎಂದರು.

ಟಾಟಾ ಏಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ನಿಯಮ ಬಾಹಿರವಾಗಿದ್ದರೂ ಅದು ಹಿಂದಿನಿಂದಲೂ ಆ ಸಂಸ್ಕೃತಿ ಜನರಲ್ಲಿ ಬೆಳೆದುಬಂದಿದೆ. ತುರ್ತು ಸಂದರ್ಭಗಳಲ್ಲಿ ಬೇರೆಡೆ ಹೋಗಲು ಈ ವಾಹನಗಳನ್ನು ಅವಲಂಭಿಸುತ್ತಾರೆ. ಪೊಲೀಸರು ಇದನ್ನು ತಡೆಗಟ್ಟುವ ಅವಶ್ಯಕತೆ ಇದೆ ಎಂದರು.

ಗಾರ್ಮೆಂಟ್‌ಗೆ ಮಹಿಳಾ ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಬರುತ್ತಿದ್ದಾರೆ. ಕಂಪನಿ ಮಾಲೀಕರು ಬಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಕೆಲವೊಂದು ಕಡೆಯಿಂದ ಬರುವವರು ಗೂಡ್ಸ್ ಆಟೋಗಳಲ್ಲೇ ಬರುತ್ತಿದ್ದಾರೆ. ಅದಕ್ಕೂ ಮುಂದಿನ ದಿನಗಳಲ್ಲಿ ಕಡಿವಾಣ ಹಾಕುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಹಸೀಲ್ದಾರ್ ಡಾ.ಸ್ಮಿತಾರಾಣಿ, ಟಿಎಚ್‌ಒ ಡಾ.ರವೀಂದ್ರ ಗೌಡ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸೇರಿದಂತೆ ಇತರರು ಇದ್ದರು.ಇಂದು ವಿದ್ಯುತ್ ವ್ಯತ್ಯಯ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಸೆ.20ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆವರೆಗೆ ವಿದ್ಯತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ. ಗ್ರಾಮಗಳು: ಬಿ.ಜಿ.ಪುರ, ಕಗ್ಗಲೀಪುರ, ದ್ಯಾವಪಟ್ಟಣ, ಹೊಸಹಳ್ಳಿ, ತಿಗಡಹಳ್ಳಿ, ಕಿರಗಸೂರು, ಅಂತರಾಯನಪುರದೊಡ್ಡಿ, ಪೂರಿಗಾಲಿ, ಮುಟ್ಟನಹಳ್ಳಿ, ಕೊಡಗಳ್ಳಿ, ದೊಡ್ಡಬೂವಳ್ಳಿ, ಸೋಮನಹಳ್ಳಿ, ಚಿಕ್ಕಬಾಗಿಲು, ಹುಲ್ಲಂಬಳ್ಳಿ, ಸರಗೂರು, ಬಿ.ಜೆ.ಮೊಳೆ, ಮಲ್ಲಿನಾಥಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.