ಸಾರಾಂಶ
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ೨೦೨೫-೨೬ ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಎಂ. ವಸಂತ ಕಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಡುಪಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ೩೩ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಹರೀಶ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಮಾಜಿ ಅಧ್ಯಕ್ಷ ಕೆ ಪ್ರಶಾಂತ್ ಬಾಳಿಗಾ ಮತ್ತು ಎಲ್ಲಾ ಪೂರ್ವಾಧ್ಯಕ್ಷರು ಸೇರಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು.
ನಂತರ ನಡೆದ ಸಭೆಯಲ್ಲಿ ಎಂ. ವಸಂತ್ ಕಿಣಿ ಅವರು ೨೦೨೫-೨೬ ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ. ವಲ್ಲಭ್ ಭಟ್, ಹೃಷಿಕೇಶ್ ಹೆಗ್ಡೆ ಹಾಗೂ ಕೃಷ್ಣಪ್ರಸಾದ್ ಶೆಟ್ಟಿ. ಕಾರ್ಯದರ್ಶಿಯಾಗಿ ಕೆ. ರಂಜನ್ ಕಲ್ಕೂರ, ಕೋಶಾಧಿಕಾರಿಯಾಗಿ ಆನಂದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕೆ. ಮಹೇಶ್ ಉಡುಪ, ಸಮೀರ್ ಮೊಹಮ್ಮದ್ ಹಾಗೂ ಸುರೇಂದ್ರ ನಾಯಕ್ ಅವಿರೋಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕುಂದರ್, ಕಾರ್ಯದರ್ಶಿ ಕೃಷ್ಣಪ್ರಸಾದ್ ಶೆಟ್ಟಿ ಹಾಗೂ ರಂಜಾನ್ ಕಲ್ಕೂರ ಅವರು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಯವರಿಗೆ ಅಧಿಕಾರ ಹಸ್ತಾಂತರಿಸಿದರು.ಸಂಘದ ಸ್ಥಾಪಕ ಅಧ್ಯಕ್ಷ ವಿನ್ಸೆಂಟ್ ಪಿಂಟೋ ಅವರ ಸುದೀರ್ಘ ಸೇವೆಗಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ನುಡಿಯಲ್ಲಿ ಸಂಘವು ನಡೆದು ಬಂದ ಹಾದಿಯ ಬಗ್ಗೆ ಹಾಗೂ ಸಂಘದ ಪದಾಧಿಕಾರಿಗಳ ಶುಭಾಂಶನೆಗೈದರು.ಸಂಘದ ಮಾಜಿ ಅಧ್ಯಕ್ಷ ಎಂ. ವಿಶ್ವನಾಥ ಭಟ್, ಜಾನ್ ಡಿ. ಸಿಲ್ವಾ ಹಾಗೂ ಎಂ. ಚಿತ್ತರಂಜನ್ ಭಟ್ ಅವರು ಶುಭಾಂಶನೆಗೈದರು. ಸಂಘದ ಮಾಜಿ ಅಧ್ಯಕ್ಷ ಎಂ. ಗಣೇಶ್ ಕಿಣಿ ಹಾಗೂ ಸದಸ್ಯ ಎಂ ವಾಮನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.