ಬಂಟ್ವಾಳ: ಬಂಟ್ವಾಳ ವಿಧಾನಸಭೆ ಕ್ಷೇತ್ರದ ಮಾಣಿ ಗ್ರಾಮದ ಸೂರಿಕುಮೇರು (ಕಾಯರಡ್ಕ) ಪ್ರದೇಶದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಾಸಕರ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿರುವ ಒಟ್ಟು 20 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿತು. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಬೂತ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ ತೋಟ, ಪ್ರಜ್ವಲ್ ಶೆಟ್ಟಿ, ಹರೀಶ್ ಕುಲಾಲ್, ನಾರಾಯಣ ಭಟ್ ಬಪ್ಪುಕೋಡಿ, ಗಂಗಾಧರ, ನಿತಿನ್, ಸುಧಾಮಣಿ ಅಜಿಲ, ಸುಶೀಲಾ, ಸುಜಯ, ವನಿತಾ, ಗಣೇಶ್, ಉಮೇಶ್, ಧರ್ಣಪ್ಪ ಪೂಜಾರಿ, ಕೂಸಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ಗಿರೀಶ್, ಪುರುಷೋತ್ತಮ ಚೌಟ, ಪ್ರವೀಣ, ನರೇಂದ್ರ, ಗೋಪಾಲ ಮೂಲ್ಯ ಶಂಭುಗ, ಜಗದೀಶ್ ಕುಲಾಲ್, ನಾರ್ಣಪ್ಪ ಮೂಲ್ಯ, ಲೀಲಾವತಿ, ಶಾರದಾ, ಪೌಲಿನ್ ಡಿಸೋಜ, ಪ್ರತಿಭಾ, ಪ್ರಿಯ ನಾಗೇಶ, ಜಯಂತಿ, ಹರಿಣಾಕ್ಷಿ, ಸುಮಲತಾ, ಭವಾನಿ ಶೆಟ್ಟಿ, ಗಿರೀಶ್ ನಾಯ್ಕ್, ಬಾಬು ಶೆಟ್ಟಿ ತೋಟ, ಕೇಶವ ಪೂಜಾರಿ, ಮೋಹನ್ ಗೌಡ, ನರಸಿಂಹ ಶೆಟ್ಟಿ, ಶರತ್ ನಾಯ್ಕ್, ಜಯಂತ ಗೌಡ ಹಾಗೂ ಪ್ರಶಾಂತ್ ಕುಲಾಲ್ ಶಂಭುಗ ಉಪಸ್ಥಿತರಿದ್ದರು. 172ನೇ ಬೂತಿನ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ನಿರೂಪಿಸಿದರು.