ಸಾರಾಂಶ
ಜಾಗೃತಿ ಜಾಥಾ
ಕನ್ನಡಪ್ರಭವಾರ್ತೆ ಜಗಳೂರುಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶದಂತೆ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಕೈಯಲ್ಲಿ ಇದೆ ಎಂದು ತಹಶೀಲ್ದಾರ್ ಸೈಯದ್ ಕಲೀಮ್ ಉಲ್ಲಾ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ. ಪುಟ್ ಬಾತ್ ಮೇಲೆ ಇರುವ ಅಂಗಡಿಗಳ ತೆರವಿನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಇದನ್ನು ಬಳಕೆ ಮಾಡಬಾರದು. ಸರ್ಕಾರದ ಆದೇಶಗಳಿಗೆ ಸಾರ್ವಜನಿಕರು ಸಹಕಾರ ನೀಡದಿದ್ದರೆ ಅದರ ಉದ್ದೇಶ ವಿಫಲವಾಗುತ್ತದೆ. ಜನತೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ನಿಮ್ಮ ಮಕ್ಕಳ ಭವಿಷ್ಯದ ಹಿತ ಮುಖ್ಯವಾಗಿರುತ್ತದೆ. ಪಾದಾಚಾರಿಗಳು ಪುಟ್ ಬಾತ್ ಮೇಲೆ ನಡೆದುಕೊಂಡು ಹೋಗಬೇಕು. ಹಾಗಾಗಿ ತಮ್ಮ ಅಂಗಡಿಗಳನ್ನು ತೆರುವುಗೊಳಿಸಬೇಕು. ಇದರಿಂದ ಬಹಳ ಅಪಘಾತಗಳು ನಡೆಯುವುದು ಕಮ್ಮಿಯಾಗುತ್ತದೆ ಎಂದು ಮನವಿ ಮಾಡಿದರು.
ಪ.ಪಂ. ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ, ಹಲವಾರು ಬಾರಿ ಪ.ಪಂ ಕಡೆಯಿಂದ ಪ್ರಚಾರವನ್ನು ಮಾಡಲಾಗಿದೆ. ಮೌಖಿಕವಾಗಿ ಹೇಳಲಾಗಿದೆ. ಲೋಕಾಯುಕ್ತದಲ್ಲಿ ಕೇಸ್ ಆಗಿರುವ ಕಾರಣ ಹಾಗೂ ಜಿಲ್ಲಾಧಿಕಾರಿಗಳು ಆದೇಶದ ಮೇರೆಗೆ ಪುಟ್ ಬಾತ್ ಮೇಲೆ ಇರುವ ಅಂಗಡಿಗಳನ್ನು ತೆರೆವುಗೊಳಿಸಲಾಗುತ್ತಿದೆ. ಎರಡು ದಿನ ಅವಕಾಶವನ್ನು ನೀಡಲಾಗಿದೆ ಎಂದರು.ನಾವು ಹಲವಾರು ವರ್ಷಗಳಿಂದ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕಾರಣಕ್ಕೂ ಅಂಗಡಿ ತೆರವುಗೊಳಿಸಲಿಕ್ಕೆ ಬಿಡುವುದಿಲ್ಲ ಎಂದು ಜನರು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ನಾವು ೧೮ ವರ್ಷ ೭ ವರ್ಷದಿಂದ ಡಬ್ಬಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡಲಾಗುತ್ತದೆ. ಇಲ್ಲಿ ಅಂಗಡಿಯನ್ನು ಇಟ್ಟುಕೊಂಡವರು ಕಡು ಬಡವರು. ನಮಗೆ ಜೀವನ ನಿರ್ವಹಣೆಗೆ ಬೇರೆ ಯಾವುದೇ ಕೆಲಸವಿಲ್ಲ. ನಮಗೆ ಬೇರೆ ಕಡೆ ಅಂಗಡಿ ನಡೆಸಲು ಜಾಗ ಕೊಡಿ. ಇಲ್ಲವಾದರೆ ಪುಟ್ ಬಾತ್ ಮೇಲೆ ಅಂಗಡಿಯನ್ನು ಅಂಗಡಿಯನ್ನು ನಡೆಸುತ್ತೇವೆ ಎಂದು ಅಂಗಡಿ ಅನುಸೂಯಮ್ಮ ಹೇಳಿದರು.ಏಕ ಬಳಕೆ ಪ್ಲಾಸ್ಟಿಕ್ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಟ್ಟಣ ಪಂಚಾಯಿತಿ ಶುಕ್ರವಾರ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ಪುಟ್ ಬಾತ್ ಅಕ್ರಮವಾಗಿ ಇರುವ ಅಂಗಡಿಗಳನ್ನು ತೆರುವುಗೊಳಿಸುವಂತೆ ಎರಡು ದಿನ ಪಟ್ಟಣ ಪಂಚಾಯಿತಿ ಕಾಲಾವಕಾಶ ನೀಡಿತು.
ಆರೋಗ್ಯ ನಿರೀಕ್ಷಕ ಪ್ರಶಾಂತ್, ಪೋಲಿಸ್ ಇಲಾಖೆಯ ಸಿಬ್ಬಂದಿ ಸೇರಿ ಪ.ಪಂ ಪೌರಕಾರ್ಮಿಕರು ಹಾಜರಿದ್ದರು.